ಅಪಾಯವನ್ನೂ ಲೆಕ್ಕಿಸದೇ ತುಂಗಭದ್ರಾ ನದಿ ದಾಟುತ್ತಿರೋ ಜನ.!

ಬಳ್ಳಾರಿ: ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿ ನೀರಿನಲ್ಲಿ ರೈತರು ದುಸ್ಸಾಹಸ ಮಾಡುತ್ತಿದ್ದಾರೆ. ಪ್ರಾಣ ಭಯವನ್ನೂ ಲೆಕ್ಕಿಸದೇ ರೈತರು ತೆಪ್ಪದ ಮೂಲಕ ನದಿ ದಾಟಿ ಜಮೀನಿಗೆ ತೆರಳುತ್ತಿದ್ದಾರೆ. ಸಿರುಗುಪ್ಪದ ನಿಟ್ಟೂರು ಗ್ರಾಮದ ಸಮೀಪ ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಗ್ರಾಮಸ್ಥರು ಅಪಾಯವನ್ನೂ ಲೆಕ್ಕಿಸದೆ ತೆಪ್ಪದಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ಹರಿಯೋ ನದಿಯಲ್ಲಿ ತೆಪ್ಪಗಳು ಪಲ್ಟಿ ಆಗೋ ಭೀತಿ ನಡುವೆಯೂ ತುಂಗಭದ್ರಾ ನದಿ ದಾಟುವ ಸಾಹಸ ಮಾಡುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ನದಿಗೆ ಒಂದೂವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಜನ ನದಿಗೆ ಇಳಿಯಂತೆ ಈಗಾಗಲೇ ಮೂರು ಬಾರಿ ಟಿ.ಬಿ ಬೋರ್ಡ್ ಎಚ್ಚರಿಕೆ ನೀಡಿದೆ. ಎಚ್ಚರಿಕೆಯ ನಡುವೆಯೂ ನಡುಗಡ್ಡೆ ಜಮೀನುಗಳಿಗೆ ರೈತರು ತೆಪ್ಪದಲ್ಲಿ ತೆರಳುತ್ತಿದ್ದಾರೆ.