ಗ್ಯಾರಂಟಿ ಅನುಷ್ಠಾನಗೊಳಿಸದೇ ಮೋಸ ಮಾಡಿದರೆ ಹೋರಾಟ- ಎಂ.ಜಿ. ಭಟ್‌

ಕುಮಟಾ : ರಾಜ್ಯದ ಕಾಂಗ್ರೇಸ್ ಸರ್ಕಾರ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಎಲ್ಲರಿಗೂ ನೀಡದೆ ಮೋಸ ಮಾಡಿದರೆ ಉಗ್ರ ಹೋರಾಟ ನೆಡಸಲಾಗುವುದು ಎಂದು ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ.ಜಿ. ಭಟ್‌ ಎಚ್ಚರಿಸಿದ್ದಾರೆ.

ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೇಸ್‌ ಪಕ್ಷವೂ ಅಧಿಕಾರ ಹಿಡಿಯಲೇಬೇಕೆಂಬ ಅಭಿಲಾಷಯಿಂದ 5 ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಘೋಷಣೆ ಮಾಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ತನ್ನ ಆಶ್ವಾಸನೆಯಿಂದ ಉಲ್ಟಾ ಹೊಡೆದಿದೆ. ಕೆಲವು ನಿಯಮಾವಳಿ ಹಾಕಲು ಮುಂದಾಗುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಮೋಸವಾಗಿದೆ.
ಘೋಷಣೆ ಮಾಡುವಾಗ ಇಂದಿನ ಮುಖ್ಯಮಂತ್ರಿಗಳು ಎಲ್ಲರಿಗೂ ವಿದ್ಯುತ್‌ ಉಚಿತ, ನನಗೂ ಉಚಿತ, ನಿಮಗೂ ಉಚಿತ ಪ್ರತಿಯೊಬ್ಬರಿಗೂ ಉಚಿತ ಎನ್ನುವ ಆಶ್ವಾಸನೆಯಿಂದ ರಾಜ್ಯದ ಜನರು ನಂಬಿ ಕಾಂಗ್ರೇಸ್‌ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಆದರೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಸಿದ್ದರಾಮಯ್ಯನವರು ಗ್ಯಾರಂಟಿಗಳಿಗೆ ಷರತ್ತು ಹಾಕಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು…