ಶಾಸಕ ದಿನಕರ ಶೆಟ್ಟಿಯವರಿಗೆ ನಾಡವರಿಂದ ಅಭಿನಂದನೆ

ಕುಮಟಾ : 3ನೇ ಬಾರಿ ಕುಮಟಾ- ಹೊನ್ನಾವರ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿಯವರಿಗೆ ನಾಡವರ ಸಮಾಜ ಬಾಂಧವರು ಅಭಿನಂಧನಾ ಸಮಾರಂಭ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ತೊರ್ಕೆಯ ನಾಡವರ ಸಮುದಾಯ ಭವನದಲ್ಲಿ ನೆಡೆಯಿತು.

ತೊರ್ಕೆ ಗ್ರಾ.ಪಂ ಅಧ್ಯಕ್ಷ ಆನಂದ ಕವರಿ ಮಾತನಾಡಿ, ಶಾಸಕ ದಿನಕರ ಶೆಟ್ಟಿಯವರು ನಮ್ಮ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ನೆಡೆಸಿದ್ದು ಅವರ ಜನಪ್ರೀಯ ಯೋಜನೆಯಿಂದಾಗಿಯೇ ಅವರು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಜನಪರ ಯೋಜನೆಗಳನ್ನು ಕಾಣಲು ಸಾಧ್ಯವಿದೆ ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಜಾತಿ ಧರ್ಮಗಳನ್ನು ನೋಡದೆ ಪ್ರಾಮಾಣಿಕವಾಗಿ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ನನಗೆ ಇನ್ನಷ್ಟು ಹೆಚ್ಚಿನ ಮತಗಳ ನಿರೀಕ್ಷೆಯಿತ್ತು. ಆದರೂ ಕೂಡ ನನ್ನ ಗೆಲುವು ಅಭಿವೃದ್ದಿ ಪರ ಎನ್ನುವುದು ಇದರಿಂದ ಸಾಧ್ಯವಾಗಿದೆ ಎಂದರು..