ದಾಂಡೇಲಿ :ಬರ್ಚಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಸಂಕಷ್ಟ ತಂದಿಟ್ಟ ಅಗೆದಿಟ್ಟಿರುವ ಹೊಂಡ -ಹೊಂಡ ಮುಚ್ಚುವಂತೆ ಸಾರ್ವಜನಿಕರಿಂದ ಮನವಿ

ದಾಂಡೇಲಿ : ನಗರದ ಪ್ರಮುಖ ರಸ್ತೆ ಹಾಗೂ ಯಾವಾಗಲೂ ಅತೀ ಹೆಚ್ಚು ಜನ ಸಂದಣಿ ಮತ್ತು ವಾಹನಗಳ ಓಡಾಟವಿರುವ ಬರ್ಚಿ ರಸ್ತೆಯ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗಾಗಿ ಹೊಂಡ ಅಗೆದು ತಿಂಗಳಾದರೂ ಈವರೇಗೆ ಮುಚ್ಚದಿರುವುದರಿಂದ ಸುಗಮ ವಾಹನ ಸಂಚಾರಕ್ಕೆ, ಸ್ಥಳೀಯ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗತೊಡಗಿದೆ.

ಅಗೆದಿಟ್ಟ ಹೊಂಡದಲ್ಲಿ ವಿದ್ಯುತ್ ಕೇಬಲ್ ಅಳವಡಿಸಿ ಹೊಂಡ ಮುಚ್ಚುವ ಕಾರ್ಯ ಮಾಡದಿರುವುದರಿಂದ ವಾಹನ ಸಂಚಾರಕ್ಕಂತೂ ಸಂಚಕಾರವಾಗತೊಡಗಿದೆ. ಆದ್ದರಿಂದ ಈ ಕೂಡಲೆ ಅಗೆದಿಟ್ಟ ಹೊಂಡವನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯ ಸಾರ್ವಜನಿಕರು ಇಂದು ಸೋಮವಾರ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.