ಹೈದರಾಬಾದಿನ ಕುಕ್ಕಟಪಲ್ಲಿ ಜಿಮ್ ಕೇಂದ್ರದಲ್ಲಿ ಬೆಂಕಿ ಅವಘಡ, ಸುಟ್ಟು ಕರಕಲಾದ ಜಿಮ್ ಟ್ರೈನರ್, ಬೆಂಕಿ ಹಾಕಿದ್ದು ಮಾಜಿ ಪತ್ನಿ ಮತ್ತು ಅವಳ ಗೆಳೆಯ

Gym trainer murder: ಪೊಲೀಸರ ತನಿಖೆಯಲ್ಲಿ ಜಯಕೃಷ್ಣ ಕೊಲೆ ಪ್ರಕರಣ ಬಯಲಾಗಿದೆ. ಜಯಕೃಷ್ಣನನ್ನು ಕೊಂದಿದ್ದು ಆತನ ವಿಚ್ಛೇದಿತ ಪತ್ನಿ ಎಂದು ತಿಳಿದುಬಂದಿದೆ. ಪ್ರಿಯಕರನ ಜೊತೆ ಸೇರಿ ಪತಿಯನ್ನು ಪತ್ನಿಯೇ ಕೊಂದಿದ್ದಳು.

ವಾರದ ಹಿಂದೆ ಕುಕ್ಕಟಪಲ್ಲಿ ಪ್ರಸನ್ನನಗರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸಂಚಲನ ಮೂಡಿಸಿತ್ತು. ಜಯಕೃಷ್ಣ ಎಂಬ ಜಿಮ್ ಟ್ರೈನರ್ ಜೀವಂತ ಸುಟ್ಟುಹೋಗಿದ್ದರು. ಆದರೆ ಆರಂಭದಲ್ಲಿ, ಅಪಘಾತವೆಂದು ಆನಂತರ ಅದು ಆತ್ಮಹತ್ಯೆಯೆಂದು ತಿಳಿದು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು. ಆದರೆ ತನಿಖೆಯ ವೇಳೆ ಪೊಲೀಸರಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಬೇರೆಯದ್ದೇ ಆಯಾಮ ಸಿಕ್ಕಿದೆ ಪ್ರಕರಣಕ್ಕೆ. ಜಿಮ್ ಟ್ರೈನರ್ ಸಾವಿನ ಪ್ರಕರಣದಲ್ಲಿ ನಿಗೂಢತೆ ಬೇಧಿಸಲಾಗಿದ್ದು ಅದು ಅಪಘಾತ ಅಥವಾ ಆತ್ಮಹತ್ಯೆಯಲ್ಲ, ಬದಲಿಗೆ ಯೋಜಿತ ಕೊಲೆ ಎಂಬುದು ಸ್ಪಷ್ಟವಾಗಿದೆ.

ಪೊಲೀಸರ ತನಿಖೆಯಲ್ಲಿ ಜಯಕೃಷ್ಣ ಕೊಲೆ ಪ್ರಕರಣ ಬಯಲಾಗಿದೆ. ಜಯಕೃಷ್ಣನನ್ನು ಕೊಂದಿದ್ದು ಬೇರಾರೂ ಅಲ್ಲ, ಅವರ ವಿಚ್ಛೇದಿತ ಪತ್ನಿ ಎಂದು ತಿಳಿದುಬಂದಿದೆ. ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ, ಜಯಕೃಷ್ಣ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿರುವುದಾಗಿ ನಂಬಿಸಲು ಯತ್ನಿಸಿದ್ದಾಳೆ. ಮೃತಳ ತಂದೆಯ ದೂರಿನ ಮೇರೆಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ಆರಂಭಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಮೃತನ ವಿಚ್ಛೇದಿತ ಪತ್ನಿಯು, ಚಿನ್ನಾ ಎಂಬ ಬೇರೊಬ್ಬ ವ್ಯಕ್ತಿಯೊಂದಿಗೆ ಕಳೆದ ಐದು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.