ಕೇದಾರನಾಥ ದೇವಾಲಯದ ಶಿಖರಕ್ಕೆ ಮೆರುಗು ತರಲಿದೆ ಚಿನ್ನದ ಕಳಸ!

ಕೆಲವು ವರ್ಷಗಳ ಹಿಂದೆ, ಕೇದಾರನಾಥ ದೇವಾಲಯದ ಮೇಲ್ಭಾಗದಲ್ಲಿ ಚಿನ್ನದ ಕಲಶವು ವಿಜೃಂಭಿಸುತ್ತಿತ್ತು. ಆದರೆ ಈ ಕಲಶವು ತುಂಬಾ ಹಳೆಯದು ಮತ್ತು ಹಾನಿಗೊಳಗಾಗಿತ್ತು. ಇದೀಗ ಕಲಶವನ್ನು ಮತ್ತೆ ಸ್ಥಾಪಿಸುವ ಸುದ್ದಿ ಬಂದಿದೆ.

ಉತ್ತರಾಖಂಡದ ಕೇದಾರನಾಥ ದೇಗುಲ ಪವಿತ್ರ ಪುಣ್ಯಕ್ಷೇತ್ರಗಳಲ್ಲೊಂದು. ಶಿವನ ನೆಲೆಯಾದ ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಹಿಮ ಶಿಖರಗಳ ನಡುವೆ ಕಂಗೊಳಿಸುವ ಕೇದಾರನಾಥ ದೇವಾಲಯದ ಮೇಲ್ಭಾಗದಲ್ಲಿ ಇನ್ನು ಮುಂದೆ ಸೂರ್ಯನ ಬೆಳಕಲ್ಲಿ ಚಿನ್ನದ ಕಳಸವೊಂದು ಫಳಫಳನೆ ಹೊಳೆಯಲಿದೆ. 

ಕೆಲವು ವರ್ಷಗಳ ಹಿಂದೆ, ಕೇದಾರನಾಥ ದೇವಾಲಯದ ಮೇಲ್ಭಾಗದಲ್ಲಿ ಚಿನ್ನದ ಕಲಶವು ವಿಜೃಂಭಿಸುತ್ತಿತ್ತು. ಆದರೆ ಈ ಕಲಶವು ತುಂಬಾ ಹಳೆಯದಾಗಿ ಹಾನಿಗೊಳಗಾಗಿತ್ತು. ಇದೀಗ 28 ವರ್ಷಗಳ ಸುದೀರ್ಘ ಅಂತರದ ನಂತರ, ಕೇದಾರನಾಥ ದೇಗುಲದ ಮೇಲ್ಭಾಗದಲ್ಲಿ ತ್ರಿಕೋನಾಕೃತಿಯ ಚಿನ್ನದ ಕಲಶವನ್ನು ಇರಿಸಲು ಮೂವರು ದಾನಿಗಳು ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯನ್ನು ಸಂಪರ್ಕಿಸಿದ್ದಾರೆ. ಈ ಕಲಶವು ದೇವಾಲಯದ ಪ್ರಾಚೀನ ಕಲಶದ ವಿಗ್ರಹದಂತೆಯೇ ಇರುತ್ತದೆ.

ಈ ಜನರೊಂದಿಗೆ ಅಂತಿಮ ಮಾತುಕತೆಯ ನಂತರ ದೇವಾಲಯದ ಸಮಿತಿಯು ಅಗತ್ಯವಿರುವ ಎಲ್ಲಾ ವಿಧಿವಿಧಾನಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಿದೆ. ಇದಾದ ನಂತರ ದಾನಿಗಳ ನೆರವಿನಿಂದ ದೇವಾಲಯದ ಮೇಲ್ಭಾಗದಲ್ಲಿ ಭವ್ಯವಾದ ಕಲಶವನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಪಂಚಾಂಗವನ್ನು ಲೆಕ್ಕ ಹಾಕಿ ದಿನ ಮತ್ತು ಶುಭ ಮುಹೂರ್ತವನ್ನು ನಿರ್ಧರಿಸಲಾಗುವುದು. ಹೊಸದಾಗಿ ಸ್ಥಾಪಿತವಾಗುವ ಕಳಸ ಸುಮಾರು 5 ರಿಂದ 7 ಕೆಜಿ ತೂಕವಿರಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ. 

ಕೇದಾರನಾಥ ದೇವಾಲಯ ವಿಶೇಷ
ಸುಮಾರು 1200 ವರ್ಷಗಳ ಹಳೆಯ ಕೇದಾರನಾಥ ದೇವಾಲಯವು ಉತ್ತರಾಖಂಡದ ಮಂದಾಕಿನಿ ನದಿಯ ಬಳಿ ಇದೆ. ಹವಾಮಾನ ವೈಪರೀತ್ಯದಿಂದಾಗಿ, ಈ ದೇವಾಲಯವು ಏಪ್ರಿಲ್ ಮತ್ತು ನವೆಂಬರ್ ತಿಂಗಳ ನಡುವೆ ಮಾತ್ರ ಸಾರ್ವಜನಿಕರಿಗೆ ತೆರೆದಿರುತ್ತದೆ. ಚಳಿಗಾಲದಲ್ಲಿ, ದೇವಾಲಯದ ವಿಗ್ರಹವನ್ನು ಮುಂದಿನ ಆರು ತಿಂಗಳ ಕಾಲ ಪೂಜಿಸಲು ಉಖಿಮಠಕ್ಕೆ ಒಯ್ಯಲಾಗುತ್ತದೆ. ಕೇದಾರನಾಥನನ್ನು ಶಿವನ ರೂಪವಾಗಿ ನೋಡಲಾಗುತ್ತದೆ. ಆತ ಈ ಪ್ರದೇಶದ ಐತಿಹಾಸಿಕ ಹೆಸರಾದ ‘ಕೇದಾರಖಂಡದ ಅಧಿಪತಿ’ಯಾಗಿದ್ದಾನೆ.  ದೇವಸ್ಥಾನವನ್ನು ರಸ್ತೆಯ ಮೂಲಕ ನೇರವಾಗಿ ಪ್ರವೇಶಿಸಲಾಗುವುದಿಲ್ಲ ಮತ್ತು ಗೌರಿಕುಂಡ್‌ನಿಂದ 22 ಕಿಲೋಮೀಟರ್ ಮೇಲ್ಮುಖವಾಗಿ ಹತ್ತುವ ಮೂಲಕ ತಲುಪಬೇಕು. ದೇವಾಲಯವನ್ನು ತಲುಪಲು ಪೋನಿ, ಹೇಸರಗತ್ತೆ ಲಭ್ಯವಿದೆ. ಹಿಂದೂ ದಂತಕಥೆಗಳ ಪ್ರಕಾರ, ಈ ದೇವಾಲಯವನ್ನು ಆರಂಭದಲ್ಲಿ ಪಾಂಡವರು ನಿರ್ಮಿಸಿದರು ಮತ್ತು ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.