20 ಅಡಿ ಆಳದ ಬಾವಿಗೆ ಬಿದ್ದ ಹಸುವನ್ನು ರಕ್ಷಣೆ ಮಾಡಿದ ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ

ಭಟ್ಕಳ:  ಬಾವಿಯಲ್ಲಿ ಬಿದ್ದ ಹಸುವೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಮಾರಿಕಟ್ಟೆ ಭರಣಿ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ನಡೆದಿದೆ..

ಸುಮಾರು 20 ಅಡಿ ಆಳದಲ್ಲಿ ದೊಡ್ಡ ಪ್ರಮಾಣದ ಹಸು ಬಿದ್ದಿರುವುದನ್ನು ಗಮನಿಸಿದ  ಸ್ಥಳೀಯರೊರ್ವರು ತಕ್ಷಣ ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ
20 ಅಡಿ ಆಳದಲ್ಲಿ ಬಿದ್ದ ಹಸುವನ್ನು ಹಗ್ಗ ಹಾಗೂ ಹೋಸ್ ಗಳ ಸಹಾಯದಿಂದ ಮೇಲಕ್ಕೆ ಎತ್ತಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಈ ಕಾರ್ಯಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಎಸ್ ರಮೇಶ ,ಶ್ರೀ ಪರಮೇಶ, ಮಂಜುನಾಥ ಹೆಗಡೆ, ಮಾರುತಿ ನಾಯ್ಕ, ಚಂದ್ರಶೇಖರ ನಾಯ್ಕ, ಶಂಕರ ಲಮಾಣಿ, ಚೇತನ ಪಾಟೀಲ, ಸಾಗರ ಗಂಗೋಜಿ, ವಿಜಯಕುಮಾರ ಕೆ ಎಮ್ ಉಪಸ್ಥಿತರಿದ್ದರು