ಕಾರು ಮತ್ತು ಬೈಕ್ ನಡುವೆ ಅಪಘಾತಬೈಕ್ ಸವಾರ ಮೃತ

ಭಟ್ಕಳ: ಕಾರು ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತ ಪಟ್ಟಿರುವ ಘಟನೆ ಭಟ್ಕಳದ ಸಾಗರಸ್ತೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಭಟ್ಕಳದ ಉಸ್ಮನಿಯ ಕಾಲನಿ ನಿವಾಸಿ ಹಿಸಾಮುದ್ದೀನ್ ಶರೀಫ್ (30) ಎಂದು ಗುರುತಿಸಲಾಗಿದೆ.
ಬೈಕ್ ನ ಹಿಂಬದಿ ಸವಾರ ಮೊಹಮ್ಮದ್ ಕುತುಬ್ (20) ಗಾಯಗಳಾಗಿ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಜನ ಸ್ನೇಹಿತರು 3 ಬೈಕುಗಳಲ್ಲಿ ಸಾಗರ ರಸ್ತೆಯ ಕಡೆ ಹೋಗಿದ್ದರು ಎನ್ನಲಾಗಿದ್ದು ಕುಂದಾಪುರ ನಂಬರ್ ಪ್ಲೇಟ್ ಇರುವ ಟೂರಿಸ್ಟ್ ಕಾರು ಬೈಕ್ ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.