ಶಿವಣ್ಣ ಹಾಡಿಗೆ ಡೈಲಾಗ್ ಗೆ ಹುಚ್ಚೇದ್ದು ಕುಣಿದ ಅಭಿಮಾನಿಗಳು

ಸಿದ್ದಾಪುರ : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ರವರು ಇಂದು ಚುನಾವಣೆ ಪ್ರಚಾರ ಮೆರವಣಿಗೆಯಲ್ಲಿ ಅಭಿಮಾನಿಗಳ ಗಮನ ಸೆಳೆದರು ಶಿವಣ್ಣನ ಡೈಲಾಗ್ ಹಾಡಿಗೆ ಅಭಿಮಾನಿಗಳು ಸಿಳ್ಳೆ ಚಪ್ಪಾಳೆಯೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಈ ದೃಶ್ಯವು ಸಿದ್ದಾಪುರ ಪಟ್ಟಣದಲ್ಲಿ ಕಂಡುಬoದಿತು, ಕಾಂಗ್ರೇಸ್ಸಿನ ಶಿರಸಿ ಸಿದ್ದಾಪುರ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ಪ್ರಚಾರ ನಡೆಸಿ ಮಾತನಾಡುವ ವೇಳೆ ಈ ದೃಶ್ಯ ಕಂಡು ಬಂದಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ ಯಾವುದೇ ಕೆಲಸವನ್ನಾದರೂ ಮನಸ್ಸಿನಿಂದ ಮಾಡಬೇಕು ಯಾರನ್ನು ಆರಿಸಬೇಕಾದರೂ ಮನಸ್ಸಿನಿಂದ ಆರಿಸಬೇಕು ಭೀಮಣ್ಣನವರು ಓರ್ವ ಒಳ್ಳೆಯ ವ್ಯಕ್ತಿ ಅವರ ಒಳ್ಳೆಯತನಕ್ಕೆ ನಾನು ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದರು.
ಇಂದಿನ ಈ ಕಾರ್ಯಕ್ರಮದಲ್ಲಿ ಸೇರಿದ ಎಲ್ಲರಲ್ಲೂ ನಗುಮುಖ ಕಾಣುತ್ತಿದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣನವರನ್ನು ಆಯ್ಕೆ ಮಾಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.