ಕುಡಿಯಲು ಹಣ ನೀಡಲಿಲ್ಲವೆಂದು ತಾಯಿಯನ್ನೇ ಹತ್ಯೆಗೈದ ಪಾಪಿ ಮಗ

ಕುಮಟಾ: ಮದ್ಯ ಕುಡಿಯಲು ಹಣ ನೀಡಲಿಲ್ಲ ಎನ್ನುವ ಒಂದು ಕಾರಣಕ್ಕೆ ಮಗನೇ ತಾಯಿಯನ್ನು ಭೀಕರವಾಗಿ ಕೊಂದ ಘಟನೆ ತಾಲೂಕಿನ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ. ಮಗನ ಈ ದುಷ್ಕೃತ್ಯಕ್ಕೆ ತಂದೆಯೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಗೀತಾ ಭಟ್​ (64) ಮೃತ ದುರ್ದೈವಿ. ಮಗ ಮಧುಕರ ಭಟ್​(33) ಆರೋಪಿಯಾಗಿದ್ದಾನೆ.

ದಿನನಿತ್ಯ ಮನೆಯಲ್ಲಿ ತನ್ನ ಕುಡಿತಕ್ಕೆ ಹಣ ನೀಡುವಂತೆ ಗೀತಾ ಭಟ್​ ಮಗ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಇವರ ಮನೆಯಲ್ಲಿ ಕುಡಿತದ ಕಾರಣದಿಂದ ದಿನವೂ ಕಲಹ ನಡೆಯುತ್ತಲೇ ಇತ್ತು. ಆದರೆ ಹಣ ನೀಡದ ಕಾರಣ ಮಗ ಗೀತಾ ಭಟ್​ಳನ್ನು ಕಟ್ಟಿಗೆಯಿಂದ ಹೊಡೆದು ಕೊಂದ್ದಿದ್ದಾರೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಕುಮಟಾ ಪಿಎಸ್‌ಐ ನವೀನಕುಮಾರ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಮಧುಕರ್ ಭಟ್ಟನನ್ನು ಬಂಧಿಸಿದ್ದಾರೆ.