ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ನಟ ಅಜಯ್‌ ದೇವಗನ್‌ ವಿರುದ್ಧ ಕೇಸ್ ದಾಖಲು

ಮುಂಬೈ: ನಿರ್ದೇಶಕ ಇಂದ್ರ ಕುಮಾರ್, ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಸಿದ್ಧಾರ್ಥ ಮಲ್ಹೋತ್ರಾ ವಿರುದ್ಧ ಜಾನ್‌ಪುರ್ ನ್ಯಾಯಾಲಯದಲ್ಲಿ ವಕೀಲ ಹಿಮಾಂಶು ಶ್ರೀವಾಸ್ತವ ಅವರು ಮೊಕದ್ದಮೆ ಹೂಡಿದ್ದಾರೆ.

ಅರ್ಜಿದಾರರ ಪ್ರಕಾರ, ಬಿಡುಗಡೆಯಾದ ‘ಥ್ಯಾಂಕ್ಸ್ ಗಾಡ್’ ಚಿತ್ರದ ಟ್ರೇಲರ್ ಧರ್ಮವನ್ನು ಅಣಕಿಸುತ್ತದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಅಜಯ್‌ ದೇವಗನ್‌ ಸೂಟ್‌ ಧರಿಸಿ ಚಿತ್ರಗುಪ್ತ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಂದು ದೃಶ್ಯದಲ್ಲಿ ಅವರು ಹಾಸ್ಯ ಮಾಡಿ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ ಎಂದು ಶ್ರೀವಾಸ್ತವ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ದೂರುದಾರ ಶ್ರೀವಾಸ್ತವ್ ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಧೀಶರು ನವೆಂಬರ್ 18 ಕ್ಕೆ ದಿನಾಂಕ ನಿಗದಿಪಡಿಸಿದ್ದಾರೆ.