ದಿ. ಆರ್.ಎನ್. ಶೆಟ್ಟಿಯವರ ಪಂಚಲೋಹದ ಪ್ರತಿಮೆ ಅನಾವರಣ

ಭಟ್ಕಳ: ಮುರ್ಡೇಶ್ವರ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್. ಶೆಟ್ಟಿಯವರ ಪಂಚಲೋಹದ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿದೆ.

ಈ ಹಿಂದೆ ಮುರ್ಡೇಶ್ವರ ಶಿವನ ವಿಗ್ರಹದ ಮುಂಭಾಗದಲ್ಲಿರುವ ಕಂದುಕಗಿರಿಯಲ್ಲಿ ಸುಮಾರು 1,560 ಕೆಜೆ ತೂಕ ಹಾಗೂ 15 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಅದೇ ರೀತಿ ಈಗ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್. ಶೆಟ್ಟಿಯವರ ಪಂಚಲೋಹದ ಪ್ರತಿಮೆ ಅನಾವರಣ ಮಾಡಲಾಗಿದೆ.

ಈ ಸಂದರ್ಭದಲ್ಲಿ ಆರ್.ಎನ್.ಶೆಟ್ಟಿ ಪುತ್ರ ಸತೀಶ್ ಶೆಟ್ಟಿ, ಶಾಸಕ ಸುನೀಲ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.