ಧರ್ಮಾಚರಣೆಯೇ ಸಮಾಜದ ಸ್ವಾಸ್ಥಕ್ಕೆ ಮೂಲ – ವಿ. ವಾಸುದೇವ ಭಟ್ಟ ಹಂದಲಸು

ಯಲ್ಲಾಪುರ: ಧರ್ಮಾಚರಣೆಯಿಂದ ಮಾತ್ರ ಸಮಾಜ ಸ್ವಸ್ಥವಾಗಿರುವುದಕ್ಕೆ ಸಾಧ್ಯ ಎಂದು ವಿದ್ವಾನ್ ವಾಸುದೇವ ಭಟ್ಟ ಹಂದಲಸು ಹೇಳಿದರು. ಅವರು ತಾಲೂಕಿನ ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತೋತ್ಸವದದಲ್ಲಿ ಶ್ರೀಮದ್ ಭಾಗವತ ಮಹಾತ್ಮೆ ಕುರಿತು ಉಪನ್ಯಾಸ ನೀಡಿದರು.

ಧರ್ಮ ಆಚರಣೆಯೇ ಸಮಾಜದ ಸ್ವಾಸ್ಥಕ್ಕೆ ಮೂಲವಾಗಿದೆ. ಆದ್ದರಿಂದ ಸತ್ಯ, ಅಹಿಂಸೆ, ಅಸ್ತೇಯ ಮೊದಲಾದ ಸನಾತನ ಧರ್ಮದಲ್ಲಿ ಉಕ್ತವಾದ ವಿಷಯಗಳನ್ನು ಆಚರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಅಧ್ಯಾಪಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಊರ ನಾಗರಿಕರು ಪಾಲ್ಗೊಂಡಿದ್ದರು.