ಸಿದ್ದಿ ಸಮುದಾಯದವರಿಗಾಗಿ ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ಕಾರ್ಯಾಗಾರ: ಪ್ರಮಾಣಪತ್ರ ವಿತರಿಸಿದ ಶಾಂತಾರಾಮ ಸಿದ್ದಿ

ಯಲ್ಲಾಪುರ: ಪಟ್ಟಣದ ಕೊಡ್ಕಣಿ ಕಟ್ಟಡದಲ್ಲಿ ಸೇವಾ ಸಾಮಾಜಿಕ ವಿಕಾಸ ಸಂಸ್ಥೆ ಹಾಗೂ ಎಚ್.ಡಿ.ಎಫ್.ಸಿ ಪರಿವರ್ತನ ಯೋಜನೆಯಡಿ ಸಿದ್ದಿ ಸಮುದಾಯದವರಿಗಾಗಿ ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ಕಾರ್ಯಾಗಾರದ ಪ್ರಮಾಣಪತ್ರ ವಿತರಣಾ ಸಮಾರಂಭ ಶನಿವಾರ ನಡೆಯಿತು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಕಾರ್ಯಕ್ರಮ ಉದ್ಘಾಟಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಣಪತಿ ಭಟ್ಟ, ಸಂಯೋಜಕ ಪವನ ಬೊಮ್ಮನಳ್ಳಿ, ಎಚ್.ಡಿ.ಎಫ್.ಸಿ ಪರಿವರ್ತನದ ಮೋಹನ ಸಿದ್ದಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ಎನ್.ಭಟ್ಟ ತಟ್ಟಿಗದ್ದೆ, ಸೇವಾ ಸಾಮಾಜಿಕ ವಿಕಾಸ ಸಂಸ್ಥೆಯ ಸ್ವಪ್ನಾ ಉಪಸ್ಥಿತರಿದ್ದರು.