ರಸ್ತೆಯಲ್ಲಿ ಸಿಕ್ಕ ಪರ್ಸ್ ವಾರಸುದಾರರಿಗೆ ಒಪ್ಪಿಸಿದ ದೇವರಾಜ ಮೊಗೇರ.! ಸ್ಥಳೀಯರಿಂದ ಮೆಚ್ಚುಗೆ.!

ಭಟ್ಕಳ: ರಸ್ತೆಯಲ್ಲಿ‌ ಸಿಕ್ಕಿದ ಪರ್ಸ್ ಅನ್ನು ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಭಟ್ಕಳ ಗ್ರಾಮೀಣ ಠಾಣೆಯ ಸಿ.ಪಿ.ಐ ವಾಹನ ಚಾಲಕ ದೇವರಾಜ ಮೊಗೇರ ಪ್ರಾಮಾಣಿಕತೆ ಮೆರೆದಿದ್ದಾರೆ.

ಗುರುವಾರ ತಾಲೂಕಿನ ರಘುನಾಥ ರಸ್ತೆ ಮೂಲಕ ಠಾಣೆಗೆ ತೆರಳುವ ವೇಳೆ 3500 ನಗದು ಹಾಗೂ ದಾಖಲೆಗಳಿರುವ ಪರ್ಸ್ ದೇವರಾಜ ಮೊಗೇರ ಅವರಿಗೆ ಸಿಕ್ಕಿತ್ತು. ಬಳಿಕ ಪರ್ಸ್ ನಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ ಪರ್ಸ್ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ.

ಪಟ್ಟಣದ ರಘುನಾಥ ರಸ್ತೆಯ ಮಣ್ಕುಳಿ ನಿವಾಸಿ ಭಾಸ್ಕರ ನಾಯ್ಕ ಪರ್ಸ್ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ. ಬಳಿಕ‌ ಆತನನ್ನು ಭಟ್ಕಳ ಗ್ರಾಮೀಣ ಠಾಣೆಗೆ ಕರೆಸಿಕೊಂಡು ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ ಮುಖಾಂತರ ಪರ್ಸ್ ಅನ್ನು ಭಾಸ್ಕರ ನಾಯ್ಕ ನಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ. ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಅವರ ಕಾರ್ಯಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.