ಅಪಹರಣಕ್ಕೊಳಗಾದ ಬಾಲಕನನ್ನು ಕುಟುಂಬಕ್ಕೆ ಒಪ್ಪಿಸಿದ ಪೊಲೀಸರು

ಭಟ್ಕಳ:  ನಿನ್ನೆ ರಾತ್ರಿ ಅಪಹರಣವಾದ ಬಾಲಕನನ್ನು ಗೋವಾದಲ್ಲಿ ರಕ್ಷಣೆ ಮಾಡಿದ ಪೊಲೀಸರು ಇಂದು ತಾಲೂಕಾಸ್ಪತ್ರೆಗೆ ಕರೆತಂದು ಮೆಡಿಕಲ್ ಗೆ ಒಳಪಡಿಸಿದರು. ಬಳಿಕ ಬಾಲಕನನ್ನು ಸುರಕ್ಷಿತವಾಗಿ ಕುಟುಂಬದವರಿಗೆ ಒಪ್ಪಿಸಿದರು.

ಬಾಲಕನನ್ನು ಗೋವಾದ ಕ್ಯಾಲಂಗುಟ್ ಬೀಚ್ ಸಮೀಪದ ಲಾಡ್ಜ್ ನಲ್ಲಿ ಕೂಡಿಟ್ಟಿರುವ ಖಚಿತ ಮಾಹಿತಿ ಪಡೆದ ಸಿ.ಪಿ.ಐ ದಿವಾಕರ ನೇತೃತ್ವದ ತಂಡ ಗೋವಾಕ್ಕೆ ತೆರಳಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದು, ಓರ್ವ ಆರೋಪಿಯನ್ನು ಕಾರವಾರದಲ್ಲಿ ಬಂಧಿಸಲಾಗಿದೆ.