ನಾಳೆ ಮುಸ್ಲಿಂ ಏರಿಯಾದಲ್ಲಿ ತ್ರಿವರ್ಣ ಧ್ವಜ ಯಾಕೆ ಹಾರಿಸಿದ್ರಿ ಅಂತ ಕೇಳೋ ಪ್ರಸಂಗ ಬರಬಹುದು – ಸಿ.ಟಿ ರವಿ ಗುಡುಗು

ಕಾರವಾರ: ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೊ ಹಾಕಿದ್ರೆ ಏನು ತಪ್ಪು.? ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ಪ್ರಶ್ನೆ ಮಾಡಿದ್ದಾರೆ. ಗೋವಾದ ಪಣಜಿಯಲ್ಲಿ ಹೇಳಿಕೆ ನೀಡಿದ ಸಿ.ಟಿ ರವಿ ಸಿದ್ದರಾಮಯ್ಯನವರ ಹೇಳಿಕೆ ಸಮಂಜಸವಲ್ಲ. ಮುಸ್ಲಿಂ ಏರಿಯಾ ಅಂದ್ರೆ ಅದೇನು ಪಾಕಿಸ್ತಾನನಾ.? ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೊ ಹಾಕಬಾರ್ದು ಎನ್ನುವ ಆಲೋಚನೆ ದೇಶದ ಹಿತದೃಷ್ಟಿಯಿಂದ ಸಮಂಜಸವಲ್ಲ. ಇಂತ ಆಲೋಚನೆಗಳಿಂದ ದೇಶ ಉಳಿಸಲು ಸಾಧ್ಯವೇ.? ಇಂತ ಆಲೋಚನೆಗಳಿಂದಲೇ ಭಾರತ ವಿಭಜನೆ ಆಗಿದ್ದು. ಇಂತ ಆಲೋಚನೆಗಳಿಗೆ ಕಾಂಗ್ರೇಸ್ ಈಗ ಮತ್ತೆ ಕುಮ್ಮಕ್ಕು ಕೊಡುತ್ತಿದೆ. ಇದು ದೇಶಕ್ಕೆ ಅಪಾಯಕಾರಿ ಎಂದು ಕಾಂಗ್ರೇಸ್ ವಿರುದ್ಧ ಸಿ.ಟಿ ರವಿ ಗುಡುಗಿದ್ದಾರೆ.