ಯುಗಾದಿ ಹಬ್ಬ: ಗಗನಕ್ಕೇರಿದ ಹೂವು ಮತ್ತು ಹಣ್ಣುಗಳ ಬೆಲೆ, ಗ್ರಾಹಕ ಕಂಗಾಲು

ಬೆಂಗಳೂರು, ಮಾರ್ಚ್​ 29: ಯುಗಾದಿ ಹಿಂದೂಗಳಿಗೆ ಹೊಸ ವರ್ಷವಾಗಿದೆ . ಈ ಹಿನ್ನೆಲೆಯಲ್ಲಿ ಯುಗಾದಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೀಗಾಗಿ, ಬೆಂಗಳೂರಿನ ಕೆಆರ್​ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ. ಹೂವು, ಹಣ್ಣು-ಹಂಪಲು, ತರಕಾರಿಯ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ಹಣ್ಣುಗಳ ದರ ಕೊಂಚ ದುಬಾರಿಯಾಗಿದ್ದು, ಹೂವುಗಳ ದರ ಗಗನ ಕುಸುಮವಾಗಿದೆ. ಇನ್ನು ತರಕಾರಿ ದರ ಯಥಾಸ್ಥಿತಿ ಇದೆ. ಬೆಲೆ ಏರಿಕೆಯಾದರೂ ಗ್ರಾಹಕರು ಬೇರೆ ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ಖರೀದಿಸುತ್ತಿದ್ದಾರೆ.

ವಿಪರೀತ ಬೇಸಿಗೆ ಮತ್ತು ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹೂವುಗಳ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಸ್ತರು ಹೇಳಿದ್ದಾರೆ. ಇನ್ನು, ತರಕಾರಿಗಳ ಬೆಲೆಯಲ್ಲಿ ತಟಸ್ಥವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ.

ಹೂವುಗಳ ಬೆಲೆ

ಹೂಗಳ ಬೆಲೆ
ಹೂವುಗಳುಹಿಂದಿನ ದರಪ್ರಸ್ತುತ ದರ (ಕೆಜಿ ರೂಗಳಲ್ಲಿ)
ಮಲ್ಲಿಗೆ6001200
ಕನಕಾಂಬರ6001000
ಗುಲಾಬಿ100300
ಸಂಪಿಗೆ200400
ಸೇವಂತಿ200360
ತಾವರೆ10/2
ಗಣಗಳ ಹೂವು100240
ಚೆಂಡು ಹೂವು1040

ಹಣ್ಣುಗಳ ಬೆಲೆ

ಹಣ್ಣುಗಳ ಬೆಲೆ
ಹಣ್ಣುಗಳುಹಿಂದಿನ ದರಪ್ರಸ್ತುತ ದರ (ಕೆಜಿ ರೂಗಳಲ್ಲಿ)
ಸೇಬು200240
ದಾಳಿಂಬೆ150250
ಕಿತ್ತಳೆ100120
ದ್ರಾಕ್ಷಿ80120
ಮಾವು150200
ಕಲ್ಲಂಗಡಿ2025
ಬಾಳೆ ಹಣ್ಣು80100
ಸಪೋಟ100120
ತೆಂಗಿನಕಾಯಿ4060

ಪ್ರತಿ ಬಾರಿ ಹಬ್ಬ ಹರಿದಿನ, ಸಾಲು ಸಾಲು ರಜೆ ಬಂದರೆ ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಮಂದಿ ದೂರದ ಉರುಗಳತ್ತ ಮುಖ ಮಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಮನಸೋ ಇಚ್ಛೆ ಟಿಕೆಟ್ ರೇಟ್ ಫಿಕ್ಸ್ ಮಾಡಿಕೊಂಡು ಸುಲಿಗೆಗೆ ಇಳಿದಿದ್ದಾರೆ. ಹೀಗಾಗಿ, ಮತ್ತೆ ಅದೇ ಪರಿಸ್ಥಿತಿ ಮುಂದುವರೆದಿದ್ದು, ಯುಗಾದಿ, ರಂಜಾನ್ ನಿಮಿತ್ತ ಸಾಲು ಸಾಲು ರಜೆ ಹಿನ್ನೆಲೆ ಬಸ್ ಹತ್ತಲು ಮುಂದಾದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಖಾಸಗಿ ಬಸ್​ ಟಿಕೆಟ್​ ದರ ಏರಿಕೆಯಾಗಿದೆ.