ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಹೋಗಿ ಜೈಲುಪಾಲಾದ ಅಣ್ಣ!

ಬೆಂಗಳೂರು: ಅದ್ಧೂರಿಯಾಗಿ ತನ್ನ ತಂಗಿ ಮದುವೆ ಮಾಡಬೇಕೆಂದು ಗಾಂಜಾ ಮಾರಲು ಮುಂದಾಗಿದ್ದವನು ಮೊದಲ ಯತ್ನದಲ್ಲಿಯೇ ಬಾಣಸವಾಡಿ ಪೊಲೀಸರಿಗೆ ಲಾಕ್ ಆಗಿದ್ದಾನೆ. ಬಾಣಸವಾಡಿ ಪೊಲೀಸರಿಂದ ಪುತ್ತೂರು ಮೂಲದ ಬದ್ರುದ್ದಿನ್ (25) ಎಂಬಾತನ ಬಂಧನವಾಗಿದೆ.

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದಿನ್‌ಗೆ ಬರುವ ಕಡಿಮೆ ಸಂಬಳದಲ್ಲಿ ಮನೆ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಆಗಾಗ ಯಾರೋ ಸ್ನೇಹಿತರ ಮೂಲಕ ಗಾಂಜಾ ಮಾರಿ ಹಣ ಮಾಡಬಹುದು ಅಂತ ತಿಳಿದಿದ್ದ. ಅದ್ಹೇಗೋ ಪೆಡ್ಲರ್ ಒಬ್ಬರ ಸಂಪರ್ಕ ಮಾಡಿ ಒರಿಸ್ಸಾಗೆ ಹೋಗಿದ್ದ. ಅಲ್ಲಿ ಲಾರಿ ಚಾಲಕನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ಅಲ್ಲಿಂದ ದುರಂತ್ ಎಕ್ಸ್‌ಪ್ರೆಸ್ ಟ್ರೈನ್ ಮೂಲಕ ಬರುವಾಗ ಎಸ್.ಎಂ.ಟಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಲಾಕ್ ಆಗಿದ್ದಾನೆ.

ಹೆಣ್ಣೂರು ಪೊಲೀಸರು ಒರಿಸ್ಸಾದ ದಿಲೀಪ್, ಶಿವರಾಜ್, ರಾಮ್ ಹಂತಲ್ ಎಂಬುವವರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಲಾಕ್ ಮಾಡಿದ ಪೊಲೀಸರು, 21 ಲಕ್ಷ ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.