ಅಮೃತಮಹೋತ್ಸವದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ

ಯಲ್ಲಾಪುರ: ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ತಾಲೂಕಿನ ಕಿರವತ್ತಿ ಸಮುದಾಯ ಭವನದಲ್ಲಿ ಗ್ರಾ.ಪಂ.ಕಿರವತ್ತಿ, ವೀರ ಶಿವಾಜಿ ಸೇನೆ, ಐಕ್ಯತಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಹುಬ್ಬಳ್ಳಿಯ ಜಯಪ್ರಿಯ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ.ವೆಂಕಟ್ರಮಣ ಕಟ್ಟಿ, ಡಾ.ಅನುಶ್ರೀ ಕಣ್ಣಿನ ತಪಾಸಣೆ ನಡೆಸಿದರು. ನೂರಾರು ಸ್ಥಳೀಯರು ಶಿಬಿರದಲ್ಲಿ ನೇತ್ರ ತಪಾಸಣೆ ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ವರದಾನಿ, ಮಹೇಶ ಪೂಜಾರ, ಮಕ್ಸೂದ್ ಶೇಖ್, ಸುಭಾಸ ಕಳಸೂರಕರ್, ದಯಾನಂದ ನಾರ್ವೆಕರ್, ದತ್ತಾತ್ರಯ ಹೇಂದ್ರೆ, ರಾಮಚಂದ್ರ ಮರಾಠಿ, ಗಂಗಾಧರ ನಾಳಕರ್ ಮುಂತಾದವರು ಭಾಗಿಯಾಗಿದ್ದರು.