ಸ್ಕೂಟರ್‌ ಕದಿಯುತ್ತಿದ್ದ ಇಬ್ಬರು ಖದೀಮರನ್ನು ಸ್ಕೂಟರ್‌ ಸಮೇತ ಬಂಧಿಸಿದ ಹೊನ್ನಾವರ ಪಟ್ಟಣ ಪೊಲೀಸರು

ಹೊನ್ನಾವರ ಮಾರ್ಚ್‌ 17 : ಪಟ್ಟಣದ ಅಸೂರ್‌ಖಾನ್‌ಗಲ್ಲಿಯಲ್ಲಿ ಕಳ್ಳತನವಾಗಿದ್ದ ಸ್ಕೂಟರ್‌ ಪ್ರಕರಣಕ್ಕೆ ಸಂಬಂದಿಸಿದಂತೆ, ಆರೋಪಿಗಳ ಸ್ಕೂಟರ್‌ ಸಮೇತ ವಶಕ್ಕೆ ಪಡೆಯುವಲ್ಲಿ ಹೊನ್ನಾವರ ಪೋಲಿಸರು ಯಶಸ್ವಿಯಾಗಿದ್ದಾರೆ.

ಇಸ್ಮಾಯಿಲ್ ಎಂಬಾತ ತನ್ನ ಸ್ಕೂಟರ್ ಕಳುವಾಗಿದ್ದರ ಬಗ್ಗೆ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದಿದ್ದ ಹೊನ್ನಾವರ ಪೋಲಿಸರು ಆರೋಪಿಗಳಾದ ಖದಿಉಜಮಾ ಹಾಗೂ ಸಯ್ಯದ್ ಸನಾನ್ ಎಂಬುವವರನ್ನು ಬಂಧಿಸಿ ಸ್ಕೂಟರ್‌ ವಶಕ್ಕೆ ಪಡೆದುಕೊಂಡಿದ್ದು ಜೊತೆಗೆ ಮತ್ತೆರಡು ಸ್ಕೂಟರ್‌ಗಳನ್ನೂ ವಶಕ್ಕೆ ಪಡೆದಿದ್ದಾರೆ…

ಪೋಲಿಸ್ ಅಧೀಕ್ಷಕ ವಿಷ್ಣುವರ್ಧನ್, ಜಯಕುಮಾರ್, ಜಗದೀಶ್ ಎಮ್,ಮಹೇಶ್ ಎಮ್.ಕೆ. ಮಾರ್ಗದರ್ಶನದಲ್ಲಿ ಸುರೇಶ್ ಜಿ.ಕುಂಬಾರ್ ನೇತೃತ್ವದಲ್ಲಿ ಪಿಎಸ್‌ಐ ರಾಜಶೇಖರ ವಂದಲಿ, ಸಂತೋಷಕುಮಾರ್, ಶ್ರೀಮತಿ ಸಂಗೀತಾ, ಶಿವಾನಂದ ನಾವಲಗಿ ಹಾಗೂ ಸಿಬ್ಬಂದಿಗಳಾದ ಉದಯ ಹರಿಕಂತ್ರ, ಗಜಾನನ ನಾಯ್ಕ್, ರವಿ ನಾಯ್ಕ, ಪಿಂಟೋ, ದಿನೇಶ ನಾಯ್ಕ್, ಮಹಾಂತೇಶ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು….