ಸಂಸದ ಅನಂತಕುಮಾರ ಹೆಗಡೆ ಜನರನ್ನು ಪ್ರಚೋದಿಸುವ ಹೇಳಿಕೆ ಕೊಡುವುದನ್ನು ಬಿಟ್ಟು, ಜನಪರ ಕೆಲಸ ಕೆಲಸ ಮಾಡಲಿ : ಎನ್ ಕೆ ಭಟ್ಟ ಮೆಣಸುಪಾಲ.

ಯಲ್ಲಾಪುರ: ಜನರನ್ನು ಪ್ರಚೋದಿಸುವ ಹೇಳಿಕೆ ಕೊಡುವುದನ್ನು ಬಿಟ್ಟು, ಜನಪರ ಕೆಲಸ ಮಾಡುವುದನ್ನು ಸಂಸದ ಅನಂತಕುಮಾರ ಹೆಗಡೆ ಕಲಿಯಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ ಹೇಳಿದರು.
ಅವರು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,” ಸಂಸದರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಬಿಜೆಪಿ ಭಾರತವನ್ನು ಹಿಂದು ದೇಶವಾಗಿ ಮಾಡುತ್ತೇವೆ ಎಂದು ಹೇಳುತ್ತದೆ. ದೇಶದಲ್ಲಿ ಇತರ ಧರ್ಮೀಯರನ್ನು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬಿಸಿಸಿ ಸದಸ್ಯ ಉಲ್ಲಾಸ ಶಾನಭಾಗ ಮಾತನಾಡಿ, ಸಂಸದರು ದಿನ ಬೆಳಗಾದರೆ ಮಸೀದಿ ಒಡೆಯುತ್ತೇನೆ ಎಂದು ಹೇಳುತ್ತಾರೆ. ಅದಕ್ಕಿಂತ ಮೊದಲು ತಾವು ಮಂತ್ರಿ ಆಗಿದ್ದಾಗ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಲಿ. ವಿವಾದ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದೇ ರೀತಿಯ ಗೊಂದಲದ ಹೇಳಿಕೆ ನೀಡುವುದು ಮುಂದುವರಿದರೆ, ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪ್ರಮುಖರಾದ ರಾಘವೇಂದ್ರ ಭಟ್ಟ, ಎಂ ಡಿ ಮುಲ್ಲಾ, ಎಸ್ ಎಂ ಭಟ್ಟ, ವಿಜಯಲಕ್ಷ್ಮಿ ವೈದ್ಯ,ನರಸಿಂಹ ನಾಯ್ಕ,ಅನಿಲ್ ಮರಾಠೆ,ಫೈರೋಜ್ ಖಾನ್,ಇದ್ದರು.