ಯಲ್ಲಾಪುರದ ಮಲವಳ್ಳಿಯಲ್ಲಿ ವಿಕಸಿತ ಭಾರತ ಸಂದೇಶ ಸಾರುವಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಮಲವಳ್ಳಿಯಲ್ಲಿ ವಿಕಸಿತ ಭಾರತ ಸಂದೇಶ ಸಾರುವ
ಕಾರ್ಯಕ್ರಮ ನಡೆಯಿತು.


ನೂರಾರು ಸಾರ್ವಜನಿಕರು ಭಾಗವಹಿಸಿ, ಕೇಂದ್ರ ಸರ್ಕಾರದ ಹಲವು ಯೋಜನೆಗಳ ಮಾಹಿತಿ ಪಡೆದರು.

ಸಂಪನ್ಮೂಲವ್ಯಕ್ತಿ ವಿಷ್ಣು ಗೌಡರ್ ಕೇಂದ್ರದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ,ಪ್ರಮುಖರಾದ ಸುಬ್ಬಣ್ಣ ಬೊಳ್ಮನೆ, ಉಮೇಶ ಭಾಗ್ವತ್ ಕಳಚೆ, ಗೋಪಾಲಕೃಷ್ಣ ಗಾಂವ್ಕಾರ, ರವಿ ಹುಳ್ಸೆ,ಸುಬ್ಬಯ್ಯ ಭಟ್, ಮುಂತಾದವರು ಇದ್ದರು.

ಇದೇ ವೇಳೆ ವಿಕಸಿತ ಭಾರತ ಸಂಕಲ್ಪದ ಸಂದೇಶವಿರುವ 2024 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ದ್ರೋಣ್ ಯಂತ್ರದ ಮೂಲಕ ರೈತರ ಕೃಷಿಕ್ಷೆತ್ರದಲ್ಲಿ ಔಷಧ ಸಿಂಪಡಣೆ & ರಸಗೊಬ್ಬರಗಳ ಪೂರೈಕೆಯ ಪ್ರಾತ್ಯಕ್ಷಿಕೆ ನೀಡಲಾಯಿತು.