ಮುನಿಸು ಮರೆತು ಒಂದಾದ್ರಾ ಸಿದ್ದು ಡಿಕೆ ಜೋಡಿ.?! ತೆರೆದ ವಾಹನದಲ್ಲಿ ಜೊತೆಯಾಗಿ ಕಮಾಲ್.!

ಚಿಕ್ಕಬಳ್ಳಾಫುರ: ಸಿದ್ದರಾಮೋತ್ಸವ ನಂತರ ಮುನಿಸು ಮರೆತ ಡಿ.ಕೆ.ಶಿ ಹಾಗೂ ಸಿದ್ದರಾಮಯ್ಯ ಜೋಡಿ ಚಿಂತಾಮಣಿಯಲ್ಲಿ ಕಮಾಲ್ ಮಾಡಿದೆ. ತೆರೆದ ವಾಹನ ಹತ್ತಿ ಇಬ್ಬರು ನಾಯಕರು ಜೊತೆಯಾಗಿ ಮೆರವಣಿಗೆಯಲ್ಲಿ ಸಾಗಿದ್ದಾರೆ. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಕೈವಾರ ಕ್ರಾಸ್ ನಿಂದ ಚಿಂತಾಮಣಿ ವರೆಗೂ ಮೆರವಣಿಗೆ ನಡೆಯಲಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಮೆರವಣಿಗೆ ನಡೆಯುತ್ತಿದ್ದು ಮೊದಲು ಬೈಕ್ ರ್ಯಾಲಿ ನಂತರ ಪಾದಯಾತ್ರೆ ಆರಂಭವಾಗಲಿದೆ. ಇನ್ನು ಚಿಂತಾಮಣಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಆಗಮನವಾಗುತ್ತಿದ್ದಂತೆ ತಾಲೂಕಿನ ಎಚ್.ಕ್ರಾಸ್ ಬಳಿ ಅದ್ದೂರಿ ಸೇಬು ಹಣ್ಣಿನ ಹಾರ ಹಾಕಿ ಕಾರ್ಯಕರ್ತರು ಸ್ವಾಗತ ಕೋರಿದರು. ಹಾರದಲ್ಲಿದ್ದ ಸೇಬು ಹಣ್ಣನ್ನು ಡಿ.ಕೆ.ಶಿ ಕಿತ್ತು ತಿಂದರು.

ಬೈಕ್ ರ್ಯಾಲಿ ಹಾಗೂ ಪಾದಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಪರದಾಡುವಂತಾಯಿತು. ರಸ್ತೆಯ ಎರಡು ಬದಿ ಕಾಂಗ್ರೆಸ್ ಕಾರ್ಯಕರ್ತರ ದರ್ಬಾರ್ ನಿಂದ ಬೆಂಗಳೂರು ಚಿಂತಾಮಣಿ ಮುಖ್ಯ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಷ್ಟಾದರೂ ಚಿಂತಾಮಣಿ ನಗರ ಠಾಣೆ ಪೊಲೀಸರು ಜಾಣ ಕುರುಡರಂತೆ ವರ್ತಿಸಿದರು.