ಹಳಿಯಾಳ ಪಟ್ಟಣದ‌ ಕಿರಾಣಿ ಅಂಗಡಿಯಲ್ಲಿ ಕಳ್ಳತನ : ದೂರು ದಾಖಲು

ಹಳಿಯಾಳ : ಪಟ್ಟಣದ ಕಿರಾಣಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿದ್ದು, ಅಂಗಡಿಯಲ್ಲಿಟ್ಟಿದ್ದ ನಗದು 90 ಸಾವಿರ ರೂಪಾಯಿ ಹಣವನ್ನು ದೋಚಿದ ಘಟನೆ ನಡೆದಿರುವ ಬಗ್ಗೆ ಗುರುವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

ಹಳಿಯಾಳ ಪಟ್ಟಣದಲ್ಲಿರುವ ಸಂಬಾಜಿ ಯಲ್ಲಪ್ಪ ಡಾಂಗೆ ಎಂಬವರ ಕಿರಾಣಿ ಅಂಗಡಿಗೆ ಕಳ್ಳರು ನುಗ್ಗಿದ್ದು, ಅಂಗಡಿಯಲ್ಲಿ ಇಟ್ಟು ಹೋಗಿದ್ದ 90 ಸಾವಿರ ರೂಪಾಯಿ ಹಣವನ್ನು ಮತ್ತು ಸಿಸಿಟಿವಿ ಕ್ಯಾಮೆರಾದ ಡಿ.ವಿ.ಆರ್ ನ್ನು ದೋಚಿರುವ ಘಟನೆ ನಡೆದಿದೆ.

ಈ ಬಗ್ಗೆ ಕಿರಾಣಿ ಅಂಗಡಿಯ ಮಾಲಕ ಸಂಭಾಜಿ ಎಲ್ಲಪ್ಪ ಡಾಂಗೆ ಅವರು ಹಳಿಯಾಳ ಪಟ್ಟಣದಲ್ಲಿ ಗುರುವಾರ ದೂರನ್ನು ದಾಖಲಿಸಿದ್ದಾರೆ. ದೂರನ್ನು ಸ್ವೀಕರಿಸಿರುವ ಹಳಿಯಾಳ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.