ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ, ತಾಯ್ನಾಡಿಗೆ ಮರಳಿದ ನಿವೃತ್ತ ಯೋಧ ಸುದೀಪ್ ತವಣಪ್ಪ ಇಟಗಿಯವರಿಗೆ ಸನ್ಮಾನ

ಹಳಿಯಾಳ : ಸುಧೀರ್ಘ 22 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಯೋಧರಾದ ಸುದೀಪ್ ತವಣಪ್ಪ ಇಟಗಿ ಇವರನ್ನು ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಹವಗಿಯಲ್ಲಿರುವ ಸ್ವಗೃಹದಲ್ಲಿ ಸತ್ಕರಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಹಳಿಯಾಳ‌ ಪುರಸಭೆಯ ಮಾಜಿ ಅಧ್ಯಕ್ಷರಾದ ಉಮೇಶ ಬೊಳಶೆಟ್ಟಿ, ಮಾಲಾ ಬ್ರಿಗಾಂಜಾ, ಯಂಕೇಶ್, ಬಾಹುಬಲಿ ಚಿನಗಿ, ಸ್ಥಳೀಯ ಮುಖಂಡರು, ಹಾಗೂ ಟ್ರಸ್ಟ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.