ಬಾಲಕೃಷ್ಣ ಬೇಂದ್ರೆಯವರಿಗೆ ಡಾಕ್ಟರೇಟ್

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿ, ಉಪನ್ಯಾಸಕ ಬಹುಮುಖ ಪ್ರತಿಭೆಯ ಕ್ರಿಯಾಶೀಲ ವ್ಯಕ್ತಿತ್ವದ ಬಾಲಕೃಷ್ಣ ಬೇಂದ್ರೆ ಇವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಅರ್ಥಶಾಸ್ತ್ರ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಘೋಷಣೆಯಾಗಿದೆ.
ಧಾರವಾಡ ತಾಲ್ಲೂಕಿನ ಕ್ಯಾರಕೊಪ್ಪ ಗ್ರಾಮದ ಬೇಂದ್ರೆ ಅವರು “ಫಿಸ್ಕಲ್ ಮ್ಯಾನೇಜ್ಮೆಂಟ್ ಬೈ, ಇಂಡಿಯನ್ ಸ್ಟೇಟ್ ಗವರ್ನಮೆಂಟ್ಸ್” ವಿಷಯದಲ್ಲಿ ಸಂಶೋಧನೆ ಕೈಗೊಂಡು ಪ್ರಬಂಧ ಮಂಡಿಸಿದ್ದರು. ಇವರಿಗೆ ಧಾರವಾಡದ ಬಹುಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರದ (ಸಿ. ಎಮ್. ಡಿ. ಆರ್), ಸಹಾಯಕ ಪ್ರಾಧ್ಯಾಪಕ ಡಾ. ಎಸ್ ವಿ ಹನಗೋಡಿಮಠ ಮಾರ್ಗದರ್ಶನ ಮಾಡಿದ್ದರು. ಬೇಂದ್ರೆಯವರ ಪಿ.ಎಚ್. ಡಿ. ಘೋಷಣೆಗೆ ಉಪನ್ಯಾಸಕರು ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ