ಹೆಣ್ಮಕ್ಕಳ ಜತೆಗೆ ದಂಪತಿ ಆತ್ಮಹತ್ಯೆ; ಕೊಳೆತು ನಾರುತ್ತಿರುವ ಶವಗಳು

ಮೈಸೂರು: ಮೈಸೂರಿನ ಚಾಮುಂಡಿಪುರಂನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರಡನಪುರ‌ ನಿವಾಸಿ ಮಹದೇವಸ್ವಾಮಿ, ಪತ್ನಿ ಅನಿತಾ, ಮಕ್ಕಳಾದ ಚಂದ್ರಕಲಾ, ಮಹಾಲಕ್ಷ್ಮಿ ಮೃತ ದುರ್ದೈವಿಗಳು.

ಹುಣಸೂರು ತಾಲೂಕಿನ ಕರಣನಕುಪ್ಪೆ ಹೋಬಳಿ ನಿವಾಸಿ ಅನಿತಾ ಅವರು 15 ವರ್ಷಗಳ ಹಿಂದೆ ಮಹದೇವಸ್ವಾಮಿ ಅವರನ್ನು ವಿವಾಹವಾಗಿದ್ದರು. ಎಪಿಎಂಸಿ ಮಾರುಕಟ್ಟೆಯಲ್ಲಿ ಮಹದೇವಸ್ವಾಮಿ ದಲ್ಲಾಳಿಯಾಗಿದ್ದರು.

ಆದರೆ ದಂಪತಿ ತಮ್ಮ ಇಬ್ಬರು ಹೆಣ್ಣು‌ ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ವಾರದ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲೇ ಶವಗಳು ಕೊಳೆತು ನಾರುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಸದ್ಯ ಸ್ಥಳಕ್ಕೆ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ಕು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ.