ಬೈಕ್ ನಲ್ಲಿ ಬಂದು ವ್ಯಕ್ತಿಯೊಬ್ಬರ ಮೊಬೈಲ್ ಕದ್ದೊಯ್ದ ಆರೋಪಿಯನ್ನು ಹಾವೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಯಲ್ಲಾಪುರ: ಪಟ್ಟಣದಲ್ಲಿ ಬೈಕ್ ನಲ್ಲಿ ಬಂದು ವ್ಯಕ್ತಿಯೊಬ್ಬರ ಮೊಬೈಲ್ ಕದ್ದೊಯ್ದ ಆರೋಪಿಯನ್ನು ಹಾವೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯ ರಾಣೆಬೆನ್ನೂರಿನ ಅರಫಾತ ಅಬ್ದುಲ್ ಅಜೀಮಸಾಬ ಅತ್ತಾರ ಬಂಧಿತ ವ್ಯಕ್ತಿ. ಕಳವು ಮಾಡಿದ ರೆಡ್ ಮಿ ಮೊಬೈಲ್ ಹಾಗೂ ಜಾವಗಲ್ ನಿಂದ ಕಳ್ಳತನ ಮಾಡಿದ ಯಮಾಹ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಈತ ಅಂತರ್ ಜಿಲ್ಲಾ ಕಳ್ಳನಾಗಿದ್ದು, ಹಾಸನ ಜಿಲ್ಲೆಯ ಜಾವಗಲ್ ನಲ್ಲಿ ಯಮಾಹ ಬೈಕ್ ಕದ್ದಿರುವ ಬಗೆಗೆ ಪ್ರಕರಣ ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಈತನ ವಿರುದ್ಧ ಅಂಕೋಲಾ, ಹುಬ್ಬಳ್ಳಿ, ಚಿತ್ರದುರ್ಗ, ಚಿಕ್ಕಮಗಳೂರುಗಳಲ್ಲಿಯೂ ಇದೇ ಮಾದರಿಯ ಕಳ್ಳತನ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ.

ಎಸ್.ಪಿ ವಿಷ್ಣುವರ್ಧನ್, ಎ.ಎಸ್.ಪಿ ಜಯಕುಮಾರ, ಡಿ.ಎಸ್.ಪಿ ಗಣೇಶ ಮಾರ್ಗದರ್ಶನದಲ್ಲಿ ಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಧರ್ಮಾ ನಾಯ್ಕ, ಗಿರೀಶ ಲಮಾಣಿ, ಪರಶುರಾಮ ಕಾಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.