ಸಾಲ ಪಡೆದ ಹಣವನ್ನು ಹಿಂದಿರುಗಿಸದಿದ್ದಕ್ಕೆ ಪತಿ ಎದುರೇ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಲೇವಾದೇವಿಗಾರ

ಪುಣೆ, ಜುಲೈ 27:   ಪುಣೆಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ, ಸಣ್ಣ ಸಾಲ ಪಡೆದು ತೀರಿಸಲಾಗದ ವ್ಯಕ್ತಿಯ ಪತ್ನಿ ಮೇಲೆ ಆತನ ಎದುರೇ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.  ಅಷ್ಟೇ ಅಲ್ಲದೆ ಸಂಪೂರ್ಣ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಘಟನೆಯು ಪುಣೆಯ ಹಡಪ್ಸರ್ ಪ್ರದೇಶದಲ್ಲಿ ಫೆಬ್ರವರಿ 2023 ರಲ್ಲಿ ನಡೆದಿತ್ತು,ಈ ಪ್ರಕರಣದಲ್ಲಿ 34 ವರ್ಷದ ವಿವಾಹಿತ ಮಹಿಳೆ ದೂರು ದಾಖಲಿಸಿದ್ದಾರೆ. ಅದರಂತೆ ಆರೋಪಿ ಇಮ್ತಿಯಾಜ್ ಹಸಿನ್ ಶೇಖ್ (47 ವರ್ಷ) ವಿರುದ್ಧ ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಈ ವೇಳೆ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆರೋಪಿಯು ಸಂತ್ರಸ್ತೆಯ ಪತಿಗೆ ಹಣ ನೀಡಿದ್ದ, ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಸಂತ್ರಸ್ತೆಯ ಪತಿಗೆ 40 ಸಾವಿರ ರೂ. ಬಡ್ಡಿ ರಹಿತ ಸಾಲವನ್ನು ನೀಡಿದ್ದರು.

ಆದ್ದರಿಂದ ಆರೋಪಿಗಳು ಫಿರ್ಯಾದಿದಾರರನ್ನು ಮತ್ತು ಆಕೆಯ ಪತಿಯನ್ನು ಹಡಪ್ಸರ್‌ನ ಮ್ಹಾದಾ ಕಾಲೋನಿಗೆ ಕರೆದು ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ದೂರುದಾರ ಮಹಿಳೆಯ ಗಂಡನ ಮುಂದೆ ಕುಳಿತು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದರೊಂದಿಗೆ ಪತಿಯ ಎದುರೇ ಮಹಿಳೆಯನ್ನು ಅತ್ಯಾಚಾರ ಮಾಡಿದ್ದಾರೆ.

ಆರೋಪಿಗಳು ಇಡೀ ಘಟನೆಯ ವಿಡಿಯೋವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ, ಇದಾದ ನಂತರ ಆರೋಪಿಯು ಮತ್ತೆ ಫಿರ್ಯಾದಿದಾರ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಆದರೆ ಮಹಿಳೆ ನಿರಾಕರಿಸಿದ್ದರಿಂದ ಆರೋಪಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇದಾದ ಬಳಿಕ ಮಹಿಳೆ ಹಡಪ್ಸರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ಹಡಪ್ಸರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಇಮ್ತಿಯಾಜ್ ಹಸಿನ್ ಶೇಖ್ ನನ್ನು ಬಂಧಿಸಿದ್ದಾರೆ. ಹಿರಿಯ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಪುಣೆಯಲ್ಲಿ ಸಹಕಾರಿ ಇಲಾಖೆಯ ಅಧಿಕಾರಿಯೊಬ್ಬರು ಲೇವಾದೇವಿಗಾರರ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹಕಾರಿ ಇಲಾಖೆಯ ಅಕೌಂಟೆಂಟ್ ಆಗಿದ್ದು ಸೆಪ್ಟೆಂಬರ್ 19 ರಂದು ಮಂಗಳವಾರ್ ಪೇಠದ ಬಾಲಾಜಿ ಹೈಟ್ಸ್ ಕಟ್ಟಡದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಹೆಸರು ಗಣೇಶ ಶಂಕರ ಶಿಂಧೆ (52 ವರ್ಷ). ಅವರು ಆತ್ಮಹತ್ಯೆ ಪತ್ರವನ್ನೂ ಬರೆದಿದ್ದು, ಅದರಲ್ಲಿ ಸಾಲಗಾರರು ಹಣಕ್ಕಾಗಿ ಪರದಾಡುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಮುಂಬೈನಿಂದ ಪುಣೆಗೆ ವರ್ಗಾವಣೆ ಮಾಡಲು ಅಧಿಕಾರಿಗಳಿಗೆ ಪಾವತಿಸಲು ಗಣೇಶ್ ಶಂಕರ್ ಶಿಂಧೆ ಲೇವಾದೇವಿಗಾರರಿಂದ 20 ರಿಂದ 25 ರಷ್ಟು ಬಡ್ಡಿ ದರದಲ್ಲಿ 84 ಲಕ್ಷ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು.