ರಾಯಚೂರಿನಲ್ಲಿ ಲವ್, ದೋಖಾ; ಪ್ರಿಯತಮನಿಗಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ರಾಯಚೂರು, ಜು.15: ಮದುವೆಯಾಗೋದಾಗಿ ಯುವತಿಗೆ ನಂಬಿಸಿ, ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ, ಇದೀಗ ಯುವಕ ಎಸ್ಕೇಪ್​ ಆಗಿರುವ ಆರೋಪ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ತೊಪ್ಪಲದೊಡ್ಡಿ ಗ್ರಾಮದಲ್ಲಿ ಕೇಳಿಬಂದಿದೆ. ಇನ್ನು ಯುವಕ ಪರಾರಿಯಾದ ಸುದ್ದಿ ಕೇಳಿದ ಯುವತಿ, ಇತ್ತ ಪ್ರಿಯತಮನಿಗಾಗಿ ಕ್ರಿಮಿನಾಶ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪಕ್ಕದ್ಮನೆ ಹುಡುಗ ಮಲ್ಲೇಶ್ ಎಂಬಾತ ಜೊತೆ 20 ವರ್ಷದ ಯುವತಿ ಪ್ರೀತಿಯಲ್ಲಿ ಬಿದ್ದಿದ್ದಳು. ಪ್ರಿಯತಮ ಮಲ್ಲೇಶ್​ ಯುವತಿಯ ಜೊತೆಗೆ ಪ್ರೀತಿ, ಪ್ರಣಯವೆಂದು ಚೆಲ್ಲಾಟವಾಡಿದ್ದು, ಬಳಿಕ ಆಕೆಯನ್ನ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ಸಂತ್ರಸ್ಥ ಯುವತಿ ಆರೋಪಿಸಿದ್ದಾಳೆ.

ರಾತ್ರೋ ರಾತ್ರಿ ಯುವಕ ಪರಾರಿ

ಇನ್ನು ಕೊನೆಗೆ ಇಬ್ಬರಿಗೂ ಮದುವೆ ಮಾಡಲು ಡೇಟ್​ ಪಿಕ್ಸ್​ ಮಾಡಲು ಮುಂದಾಗಿದ್ದು, ಯುವಕ ರಾತ್ರೋ ರಾತ್ರಿ ಪರಾರಿಯಾಗಿದ್ದಾನೆ. ಈ ಸುದ್ದಿ ಕೇಳುತ್ತಿದ್ದಂತೆ ಯುವತಿ ಆತನಿಗಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವೃತ್ತಿಯಲ್ಲಿ ಡ್ರೈವರ್​ ಆಗಿರುವ ಮಲ್ಲೇಶ್​ಗಾಗಿ ಯುವತಿ ಪೊಲೀಸ್​ ಠಾಣೆಗೆ ಅಲೆದಾಟ ಶುರು ಮಾಡಿದ್ದಾಳೆ. ಹೌದು ಸಂತ್ರಸ್ಥ ಯುವತಿ ನ್ಯಾಯಕ್ಕಾಗಿ ಕವಿತಾಳ ಠಾಣೆಯಲ್ಲಿ ದೂರ ದಾಖಲು ಮಾಡಿದ್ದಾಳೆ. ಇನ್ನು ಎಫ್​ಐಆರ್ ದಾಖಲಾದ್ರೂ ಕ್ರಮಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದ್ದಾಳೆ.

ಇನ್ನು ಯುವತಿ ಬಾಯಿ ಮುಚ್ಚಿಸಲು ಆರೋಪಿ ಕುಟುಂಬಸ್ಥರು, ಸಂತ್ರಸ್ತೆ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದಾರೆ. ಆದಷ್ಟು ಬೇಗ ಪೊಲೀಸರು ಆರೋಪಿಯನ್ನ ಹುಡುಕಿ ವಿಚಾರಣೆ ನಡೆಸಿ, ಯುವತಿಗೆ ನ್ಯಾಯ ಒದಗಿಸಿ, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಿ.