ಶಿಥಿಲಾವಸ್ಥೆ ತಲುಪಿದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು ಕಲಿತ ಸರ್ಕಾರಿ ಶಾಲೆ

ಹಾವೇರಿ ಜಿಲ್ಲೆ ಹಾನಗಲ್​​ ಪಟ್ಟಣದಲ್ಲಿದೆ 170 ವರ್ಷದ ಹಳೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.

ಈ ಶಾಲೆಯಲ್ಲಿ 520ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.ಈ ಶಾಲೆಯಲ್ಲಿ ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು, ಸಂಸದ ಶಿವಕುಮಾರ ಉದಾಸಿ, ದಿವಂಗತ ಮಾಜಿ ಸಚಿವ ಸಿ.ಎಂ ಉದಾಸಿ ಅವರು ಈ ಶಾಲೆಯಲ್ಲಿ ಕಲಿತಿದ್ದಾರೆ.

ಇದೀಗ ಈ ಶಾಲೆಯ ಮೇಲ್ಚಾವಣಿ, ಗೋಡೆಗಳು ಗಾಳಿ ಮಳೆಗೆ ಹಾಳಾಗಿದ್ದು, ಮಳೆ ಬಂದರೆ ಸೋರುವ ಕೊಠಡಿಗಳಿಗೆ ವಿದ್ಯುತ್ ಸಂಪರ್ಕವೂ ಇಲ್ಲ.ಮಂದ ಬೆಳಕು, ಕತ್ತಲಲ್ಲಿಯೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.ಕೊಠಡಿಗಳಿಲ್ಲದೇ ಶಾಲಾ ಮಕ್ಕಳ ಪರದಾಡುತ್ತಿದ್ದು, ಅಂಗೈಯಲ್ಲಿ ಜೀವ ಹಿಡಿದುಕೊಂಡು ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಮಳೆ ಬಂದರೆ ಮೇಲ್ಛಾವಣಿ ಸೋರುತ್ತೆ, ಗೋಡೆಗಳ ಬಿರುಕು ಬಿಟ್ಟಿವೆ.

ಈ ಶಾಲೆಯಲ್ಲಿ ಅಲೆಮಾರಿ, ಕೊರಚ, ಕೊರವ ಮತ್ತು ಬಡ ಮಕ್ಕಳು ಓದುತ್ತಿದ್ದಾರೆ.