ಅನುಮಾನಸ್ಪದ ರೀತಿಯಲ್ಲಿ ಫೈನಾನ್ಸ್ ಕಂಪನಿಯ ಬಿಲ್ ಕಲೆಕ್ಟರ್​ನ ಶವ ಪತ್ತೆ

ಮೈಸೂರು: ಜಿಲ್ಲೆಯ  Hunsur ತಾಲೂಕಿನ ಬಿಳಿಕೆರೆ ಗ್ರಾಮದ ಬಳಿ 21 ವರ್ಷದ ಕೊಳಗಟ್ಟ ಗ್ರಾಮದ ಅರುಣ್ ಕುಮಾರ್ ಎಂಬಾತನ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಇತ ಖಾಸಗಿ ಫೈನಾನ್ಸ್ ಕಂಪನಿ ಯಲ್ಲಿ ಬಿಲ್ ಕಲೆಕ್ಟರ್ ಆಗಿ, ಕೆಲಸ ಮಾಡುತ್ತಿದ್ದ. ನಿನ್ನೆ(ಜು.4) ಮ್ಯಾನೇಜರ್ ಕರೆಯುತ್ತಿದ್ದಾರೆಂದು ಮನೆಯಿಂದ ಹೋಗಿದ್ದ ಅರುಣ್, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಹುಡುಕಾಟ ಕುಟುಂಬಸ್ಥರು, ಸ್ನೇಹಿತರು ಹುಡುಕಾಟ ಆರಂಭಿಸಿದ್ದರು. ಬಳಿಕ ಅರುಣ್​ ಶವ ಕೆರೆ ಬಳಿ ಸಿಕ್ಕಿದ್ದು, ಯಾರೋ ಕೊಲೆ ಮಾಡಿ ಶವವನ್ನ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.