ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಕಾಳಮ್ಮ ದೇವಸ್ಥಾನದ ಆವಾರದಲ್ಲಿ ನವಗ್ರಹ ಪ್ರತಿಷ್ಠೆ ಕಾರ್ಯಕ್ರಮ


ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಕಾಳಮ್ಮ ದೇವಸ್ಥಾನದ ಆವಾರದಲ್ಲಿ ನವಗ್ರಹ ಪ್ರತಿಷ್ಠೆ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.
ವೇ.ಕುಮಾರ ಭಟ್ಟ ಕೊಳಗಿಬೀಸ್ ಹಾಗೂ ಶ್ರೀನಿವಾಸ ಭಟ್ಟ ಮಂಜಗುಣಿ ಅವರ ಮಾರ್ಗದರ್ಶನದಲ್ಲಿ ವಾಸ್ತುಹವನ, ನವಗ್ರಹ ಪ್ರತಿಷ್ಠೆ, ಈಶ್ವರನ ಸನ್ನಿಧಿ ಎದುರು ಬಸವಮೂರ್ತಿ ಪ್ರತಿಷ್ಠೆ ಹಾಗೂ ವಿವಿಧ ಧಾರ್ಮಿಕ ಕಾರ್ಯ ನಡೆಸಲಾಯಿತು.
ಶಾಸಕ ಶಿವರಾಮ ಹೆಬ್ಬಾರ್ ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಉದಯ ನಾಯ್ಕ, ಪ್ರಮುಖರಾದ ಸಂಜೀವಕುಮಾರ ಹೊಸ್ಕೇರಿ ಮುಂತಾದವರಿದ್ದರು.