ದೇಶದ ಪ್ರಥಮ ಪ್ರಜೆಗೆ ಕಲಾಗೌರವ.!

ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಬುಡಕಟ್ಟು ಸಮುದಾಯದ ಮಹಿಳೆ ಆಯ್ಕೆ ಪ್ರಕ್ರಿಯೆಗೆ ವಿಪಕ್ಷಗಳೂ ಬೆಂಬಲ ನೀಡಿದ್ದು ಇಡೀ ವಿಶ್ವ ಭಾರತದ ಕಡೆ ನೋಡುವಂತೆ ಮಾಡಿದೆ.

ಯಲ್ಲಾಪುರ: ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರನ್ನು ಚಿತ್ರಕಲಾವಿದ ಸತೀಶ ಯಲ್ಲಾಪುರ ಕುಂಚದಲ್ಲಿ ಚಿತ್ರಿಸಿ ಅಭಿನಂದಿಸಿದ್ದು ಹೀಗೆ.!

ಉಡುಪಿ: ಉಡುಪಿಯ ಲೀಫ್ ಆರ್ಟ್ ಕಲಾವಿದ ಮಹೇಶ್ ಮರ್ಣೆ ಅಶ್ವಥ ಎಲೆಯಲ್ಲಿ ದ್ರೌಪದಿ ಮುರ್ಮು ಅವರ ಚಿತ್ರ ರಚನೆ ಮಾಡಿದ್ದಾರೆ. ಅಶ್ವಥ ಎಲೆಯನ್ನು ಆಗಸದೆತ್ತರಕ್ಕೆ ಚಾಚುತ್ತಿದ್ದಂತೆ ದ್ರೌಪದಿ ಮುರ್ಮು ಅವರ ದರ್ಶನವಾಗುತ್ತದೆ. ಈ ಮೂಲಕ ಉಡುಪಿಯ ಕಲಾವಿದರೊಬ್ಬರು ಅತ್ಯುನ್ನತ ಪದವಿಗೆ ಏರಿದ ದೇಶದ ಪ್ರಥಮ ಪ್ರಜೆಗೆ ಗೌರವ ಜೊತೆ ಅಭಿನಂದನೆ ಸಲ್ಲಿಸಿದ್ದಾರೆ.