ಕಬ್ಬಿನಗದ್ದೆಗೆ ಬಂದ ಹೆಬ್ಬಾವು.!

ಯಲ್ಲಾಪುರ: ತಾಲೂಕಿನ ಹುಲಗೋಡಿನಲ್ಲಿ ಕಬ್ಬಿನಗದ್ದೆಗೆ ಬಂದ ಹೆಬ್ಬಾವನ್ನು ಕಂಡ ಜನ ಆತಂಕಗೊಂಡಿದ್ದರು. ಗ್ರಾಮದ ರಘುವೀರ ಗಜಾನನ ಮರಾಠಿ ಅವರ ಕಬ್ಬಿನಗದ್ದೆಯಲ್ಲಿ ಸುಮಾರು 7 ಅಡಿ ಉದ್ದದ ಹಾವು ಕಾಣಿಸಿಕೊಂಡಿತ್ತು. ನಂತರ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಅಕ್ಬರ್ ಅಲಿ ಹೆಬ್ಬಾವನ್ನು ಸೆರೆ ಹಿಡಿದು ರಕ್ಷಿಸಿ, ಕಾಡಿಗೆ ಬಿಟ್ಟರು. ಈ ವೇಳೆ ಅರಣ್ಯ ರಕ್ಷಕ ಚನ್ನಬಸಪ್ಪ ಹೊಸಮನಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಕರಿಸಿದರು.