120 ಜನ​ರಿಂದ ಯೋಧನ ಪತ್ನಿ ಅರೆ​ಬೆ​ತ್ತಲೆ ಮಾಡಿ ಹಲ್ಲೆ ಆರೋಪ: ಇದು ಕಟ್ಟುಕತೆ ಎಂದ ತಮಿಳುನಾಡು ಪೊಲೀಸ್‌

ಚೆನ್ನೈ (ಜೂನ್‌ 12, 2023): ತಮಿ​ಳು​ನಾ​ಡಿನ ತಿರು​ವಣ್ಣಾಮಲೈ​ನಲ್ಲಿ ಸೇನಾ ಯೋಧರೊಬ್ಬರ ಪತ್ನಿ​ಯನ್ನು 120 ಜನರು ಅರೆ​ಬೆ​ತ್ತಲೆ ಮಾಡಿ ಹಲ್ಲೆ ನಡೆ​ಸಿದ ಆರೋಪ ಕೇಳಿ​ಬಂದಿದೆ. ಖುದ್ದು ಯೋಧ ಪ್ರಭಾ​ಕ​ರನ್‌ ಈ ಆರೋಪ ಮಾಡಿ​ದ್ದಾರೆ. ಆದರೆ ಈ ಆರೋ​ಪ​ವನ್ನು ಪೊಲೀಸರು ನಿರಾಕ​ರಿ​ಸಿದ್ದು, ‘ಇದು ಉತ್ಪ್ರೇ​ಕ್ಷಿತ ಕಟ್ಟುಕತೆ’ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

ಟ್ವಿಟ್ಟರ್‌ನಲ್ಲಿ ಲೆ.ಕ. ಎನ್‌.ತ್ಯಾಗ​ರಾ​ಜನ್‌ ಅವರು ವಿಡಿ​ಯೋ​ವೊಂದನ್ನು ಹಾಕಿದ್ದು, ಅದ​ರಲ್ಲಿ ಸೇನಾ ಯೋಧ ಹವಿ​ಲ್ದಾರ್‌ ಪ್ರಭಾ​ಕ​ರನ್‌ ಮಾತನಾಡಿದ್ದಾರೆ. ‘ನನ್ನ ಪತ್ನಿ ತಿರುವಣ್ಣಾಮಲೈ​ನಲ್ಲಿ ಅಂಗಡಿ ನಡೆ​ಸು​ತ್ತಾಳೆ. ಅಲ್ಲಿ 120 ಗೂಂಡಾ​ಗಳು ಬಂದು ಅಂಗ​ಡಿ​ಯ​ಲ್ಲಿ​ನ ವಸ್ತು​ಗ​ಳನ್ನು ರಸ್ತೆಗೆ ಎಸೆ​ದಿ​ದ್ದಾರೆ. ನನ್ನ ಕುಟುಂಬಕ್ಕೆ ಚೂರಿ ತೋರಿಸಿ ಬೆದ​ರಿ​ಸಿ​ದ್ದಾರೆ ಹಾಗೂ ಪತ್ನಿ​ಯನ್ನು ಅರೆನ​ಗ್ನಗೊಳಿಸಿ ಭೀಕ​ರ​ವಾಗಿ ಹಲ್ಲೆ ಮಾಡಿ​ದ್ದಾರೆ. ದಯ​ಮಾಡಿ ತಮಿ​ಳು​ನಾಡಿ ಡಿಜಿಪಿ ಅವರು ಕ್ರಮ ಕೈಗೊ​ಳ್ಳ​ಬೇ​ಕು’ ಎಂದು ಕೋರಿ​ದ್ದಾ​ರೆ.