ಗಾಳಿಪಟದ ಮಾಂಜಾ ದಾರಕ್ಕೆ ಯುವಕನ ಕತ್ತು ಕಟ್; ಚಿಕಿತ್ಸೆ ಫಲಕಾರಿಯಾಗದೇ ಸಾವು

ಗದಗ: ನಗರದ ಡಂಬಳ ನಾಕಾ ಬಳಿ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಯುವಕನ ಕತ್ತು ಕಟ್ ಆಗಿತ್ತು. ಬಳಿಕ ಗದಗದ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ಆರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರವಿ ಎಂಬ ಯುವಕ ಇಂದು (ಜೂ.9) ಚಿಕಿತ್ಸೆ ಫಲಕಾರಿಯಾಗದೆ ಧಾರುಣ ಅಂತ್ಯ ಕಂಡಿದ್ದಾನೆ. ಪಿ.ರವಿ ಮೃತ ಯುವಕ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿಯಾದ ರವಿ. ಗದಗ ನಗರದ ಬಾರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಭಾನುವಾರ(ಜೂ.4) ಕಾರ ಹುಣ್ಣಿಮೆಯಂದು ಅವಳಿ ನಗರದಲ್ಲಿ ಗಾಳಿಪಟ ಹಾರಾಡಿಸಲಾಗುತ್ತಿತ್ತು. ಈ ವೇಳೆ ಬೈಕ್ ಮೇಲೆ ಹೋಗುವಾಗ ಗಾಳಿಪಟದ ದಾರ ಆತನ ಕತ್ತು ಸೀಳಿತ್ತು. ಇದೀಗ ಯುವಕ ಸಾವನ್ನಪ್ಪಿದ್ದು, ಮಗನನ್ನು ಕಳೆದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಈ ಕುರಿತು ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.