ಯಲ್ಲಾಪುರ: ಕಳೆದ 2-3 ದಿವಸಗಳಿಂದ ಗಾಳಿ ಸಹಿತ ಮಳೆ : , ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಕೋಟೆಮನೆಯಲ್ಲಿ ಹಾನಿ


ಯಲ್ಲಾಪುರ: ಕೋಟೆಮನೆಯ ಗೌರಿ ರಾಮಾ ಸಿದ್ದಿ, ರುಕ್ಮಿಣಿ ಕೃಷ್ಣಾ ಸಿದ್ದಿ, ದೇವಕಿ ನಾರಾಯಣ ಪಟಗಾರ, ನಾರಾಯಣ ಮಡೂರ ಪೂಜಾರಿ, ಕೃಷ್ಣ ನಾಗಾ ಸಿದ್ದಿ ಇತರರ ಮನೆಗಳ ಹೆಂಚು ಮತ್ತು ತಗಡಿನ ಶೀಟುಗಳು ಬಿರುಗಾಳಿಗೆ ಹಾರಿ ಹೋಗಿವೆ. ಕೋಟೆಮನೆ ಅಂಗನವಾಡಿ ಕೇಂದ್ರಕ್ಕೂ ಬಿರುಗಾಳಿಯಿಂದ ಹಾನಿಯಾಗಿದೆ.
ಸ್ಥಳಕ್ಕೆ ಉಪ ತಹಸೀಲ್ದಾರ ಕೆ.ಎಸ್. ಫರ್ನಾಂಡೀಸ್, ಗ್ರಾಮ ಲೆಕ್ಕಿಗರಾದ ಸವಿತಾ ಭಜಂತ್ರಿ, ಗ್ರಾ.ಪಂ. ಕಾರ್ಯದರ್ಶಿ ಶಂಕರ ನಾಯ್ಕ, ಅಧ್ಯಕ್ಷೆ ರೂಪಾ ಪೂಜಾರಿ, ಸದಸ್ಯರಾದ ಗ.ರಾ.ಭಟ್ಟ, ಖೈತಾನ್ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.