ನಡೆದಾಡುವ ದೇವರು ಶಿವಕುಮಾರ್ ಶ್ರೀ ಆಪ್ತ, ಸಿದ್ದಗಂಗಾ ಮಠದ ಲೆಕ್ಕಪತ್ರ ವಿಭಾಗದ ಮುಖ್ಯಸ್ಥ ಎಂ ಸಿದ್ದಲಿಂಗಯ್ಯ ನಿಧನ.

ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾಗಿದ್ದ ಎಂ ಸಿದ್ದಲಿಂಗಯ್ಯನವರು ಲಿಂಗೈಕ್ಯರಾಗಿದ್ದಾರೆ. ಸುಮಾರು 95 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ್ ಶ್ರೀಗಳಿಗೆ ಆಪ್ತರಾಗಿದ್ದರು.
ಮೂಲತಃ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಹಳ್ಳಿ ಗ್ರಾಮದವರಾಗಿದ್ದ ಎಂ ಸಿದ್ದಲಿಂಗಯ್ಯನವರು 1980 ರಿಂದಲೂ ಮಠದಲ್ಲಿ ಲೆಕ್ಕಪತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದರು. ಇನ್ನೂ ಇವರಿಗೆ ವಯಸ್ಸು ಆದರೂ ಕೂಡ ಇವರ ಸೇವೆ ಮಠಕ್ಕೆ ಬೇಕೆಂದು, ನಿರಂತರವಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಅಲ್ಲದೇ ಮಠದಿಂದ ಇವರಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಶ್ರೀ ಗಳಿಗೆ ಇವರು ಲೆಕ್ಕಪತ್ರ ನೋಡಿ ಕೊಟ್ಟರೇ ಸಾಕು. ಸಹಿ ಹಾಕುತ್ತಿದ್ದರು ಅಷ್ಟರಮಟ್ಟಿಗೆ ಇವರ ಮೇಲೆ‌ ಹಿರಿಯ ಶ್ರೀ ಗಳು ಸೇರಿದಂತೆ ಮಠವೂ ನಂಬಿಕೆ ಇಟ್ಟಿತ್ತು. ಇನ್ನೂ ಇವರಿಗೆ ಐದು ಜನ ಮಕ್ಕಳಿದ್ದು ನಾಲ್ವರು ಗಂಡು ಮಕ್ಕಳು, ಒಂದು ಹೆಣ್ಣು ಮಗಳಿದ್ದಾರೆ. ತುಮಕೂರಿನ ವೀರಶೈವ ರುದ್ರಭೂಮಿಯಲ್ಲಿ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆ ನಡೆಯಲಿದೆ.