2 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದಿದ್ದ ಹೆಂಡ್ತಿ..!

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾತ್ರೂಮ್‌ನಲ್ಲಿ ಕೈಗೆ ಚಾಕುವಿನಿಂದ ಕೂಯ್ದುಕೊಂಡು ಸಾವನಪ್ಪಿದ್ದ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಆನಂದ್ ಎಂಬಾತನ ಶವ ಪತ್ತೆಯಾಗಿತ್ತು. ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆಯ ವೇಳೆ ಕೊಲೆಯ ರಹಸ್ಯ ಬಯಲು. 

ಬೆಂಗಳೂರು(ಮೇ.19):  ಬರೋಬ್ಬರಿ ಎರಡು ತಿಂಗಳ ನಂತರ ಕೊಲೆ ರಹಸ್ಯವನ್ನ ಪೊಲೀಸರು ಬಯಲು ಮಾಡಿದ್ದಾರೆ. ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನ ಬಂಧಿಸಲಾಗಿದೆ. 

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾತ್ರೂಮ್‌ನಲ್ಲಿ ಕೈಗೆ ಚಾಕುವಿನಿಂದ ಕೂಯ್ದುಕೊಂಡು ಸಾವನಪ್ಪಿದ್ದ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಆನಂದ್ ಎಂಬಾತನ ಶವ ಪತ್ತೆಯಾಗಿತ್ತು. ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆಯ ವೇಳೆ ಕೊಲೆಯ ರಹಸ್ಯ ಬಯಲಾಗಿದೆ. 

ಮೃತ ಆನಂದ್ ಪತ್ನಿ ಮತ್ತು ಪ್ರಿಯಕರ ಸೇರಿ ನಡೆಸಿದ್ದರು ಅಂತ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಆನಂದ್ ಪತ್ನಿ ಅನಿತ ಮತ್ತು ಪ್ರಿಯಕರ ಹರೀಶ್ ಸೇರಿ ಆನಂದ್‌ನನ್ನ ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಆನಂದ್‌ಗೆ ಊಟದಲ್ಲಿ ನಿದ್ರೆ ಮಾತ್ರೆ ಕುಡಿಸಿದ ಬಳಿಕ ರೈಲ್ವೆ ಹಳೆ ಮೇಲೆ ತೆಗೆದುಕೊಂಡು ಹೋಗಿ ಇಡುವ ಪ್ಲಾನ್ ಮಾಡಿದ್ದರು. ಆನಂದ್ ತೂಕವಿದ್ದ ಕಾರಣ ಸಾಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕುತ್ತಿಗೆ ಹಿಸುಕಿ ಆನಂದ್‌ನನ್ನ ಕೊಂದಿದ್ದರು. 

ತಕ್ಷಣ ಬಾತ್ರೂಮ್‌ಗೆ ಎಳೆದು ತಂದು ಕೈ ಕೊಯ್ದು ಆತ್ಮಹತ್ಯೆ ಅನ್ನೋ ರೀತಿಯಲ್ಲಿ ಬಿಂಬಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ನಿದ್ರೆ ಮಾತ್ರೆ ಮತ್ತು ಕುತ್ತಿಗೆ ಹಿಸುಕಿದ್ದು ಪತ್ತೆಯಾಗಿದೆ. ಪೊಲೀಸರ ತನಿಖೆಯ ವೇಳೆ ಮೃತ ಆನಂದ್‌ನ ಪತ್ನಿ ಅನಿತ ಮತ್ತು ಪ್ರಿಯಕರ ಹರೀಶ್‌ನನ್ನ ಅರೆಸ್ಟ್ ಮಾಡಲಾಗಿದೆ. ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.