ಬೆಂಗಳೂರು (ಆ. 22): 2025 ರ ಏಷ್ಯಾ ಕಪ್ಗಾಗಿ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ, ಆಯ್ಕೆದಾರರು ಶ್ರೇಯಸ್ ಅಯ್ಯರ್ ಬದಲಿಗೆ ರಿಂಕು ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ. ರಿಂಕು ಕಳೆದ ಐಪಿಎಲ್ ಸೇರಿದಂತೆ ಕೆಲವು ಸಮಯದಿಂದ ಅದ್ಭುತ ಫಾರ್ಮ್ನಲ್ಲಿಲ್ಲ. ಹೀಗಿದ್ದರೂ ಇವರನ್ನು ಏಷ್ಯಾ ಕಪ್ಗೆ ಆಯ್ಕೆ ಮಾಡಿದ್ದಕ್ಕೆ ಸಾಕಷ್ಟು ಪ್ರಶ್ನೆಗಳು ಎದ್ದವು. ಹೀಗಿರುವಾಗ ಈಗ ಏಷ್ಯಾ ಕಪ್ ಆರಂಭಕ್ಕೆ ಸ್ವಲ್ಪ ದಿನ ಇರುವಾಗ ರಿಂಕು ಸಿಂಗ್ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ. ಯುಪಿ ಟಿ20 ಲೀಗ್ನಲ್ಲಿ ಅದ್ಭುತ ಶತಕ ಗಳಿಸುವ ಮೂಲಕ ರಿಂಕು ಸಂಚಲನ ಸೃಷ್ಟಿಸಿದ್ದಾರೆ.

ಯುಪಿ ಟಿ20 ಲೀಗ್ 2025 ರ 9 ನೇ ಪಂದ್ಯದಲ್ಲಿ ಮೀರತ್ ಮಾವೆರಿಕ್ಸ್ ಪರ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗೋರಖ್ಪುರ ಲಯನ್ಸ್ ವಿರುದ್ಧದ ಪಂದ್ಯದಲ್ಲಿ, ರಿಂಕು ಅವರ ಅದ್ಭುತ ಶತಕವು ಮೀರತ್ಗೆ ದೊಡ್ಡ ಗೆಲುವು ತಂದುಕೊಟ್ಟಿತು. ರಿಂಕು ಸಿಂಗ್ ಕೇವಲ 48 ಎಸೆತಗಳಲ್ಲಿ 108 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 7 ಬೌಂಡರಿಗಳು ಮತ್ತು 8 ಸಿಕ್ಸರ್ಗಳು ಸೇರಿದ್ದವು. ಈ ಇನ್ನಿಂಗ್ಸ್ನಿಂದಾಗಿ, ಮೀರತ್ ಮಾವೆರಿಕ್ಸ್ ಗೋರಖ್ಪುರ ಲಯನ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿತು.
ಮೀರತ್ ತಂಡಕ್ಕೆ ಭರ್ಜರಿ ಗೆಲುವು
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಗೋರಖ್ಪುರ ಲಯನ್ಸ್ ನಿರ್ಧರಿಸಿತು. 20 ಓವರ್ಗಳಲ್ಲಿ 167 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಮೀರತ್ ಮಾವರಿಕ್ಸ್ 18.5 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ ಗುರಿ ತಲುಪಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗೋರಖ್ಪುರ ಲಯನ್ಸ್ ಪರ ಧ್ರುವ್ ಜುರೆಲ್ 38 ರನ್ ಗಳಿಸಿದರು. ಅಕ್ಷದೀಪ್ ನಾಥ್ 16 ಎಸೆತಗಳಲ್ಲಿ 23 ರನ್ ಗಳಿಸಿದರು. ಸಿದ್ಧಾರ್ಥ್ ಯಾದವ್ 15 ರನ್ ಗಳಿಸಿದರು. ನಿಶಾಂತ್ ಕುಶ್ವಾಹ 24 ಎಸೆತಗಳಲ್ಲಿ 37 ರನ್ ಗಳಿಸಿದರು. ಶಿವಂ ಶರ್ಮಾ 25 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ರೀತಿಯಾಗಿ, ಗೋರಖ್ಪುರ ಲಯನ್ಸ್ 167 ರನ್ ಗಳಿಸಿತು. ಮೀರತ್ ಮಾವರಿಕ್ಸ್ ಪರ ವಿಶಾಲ್ ಚೌಧರಿ ಮತ್ತು ವಿಜಯ್ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದರು. ಇಬ್ಬರೂ ತಲಾ ಮೂರು ವಿಕೆಟ್ ಪಡೆದರು. ಜೀಶನ್ ಅನ್ಸಾರಿ ಎರಡು ವಿಕೆಟ್ ಪಡೆದರು. ಯಶ್ ಗಾರ್ಗ್ ಕೂಡ ಒಂದು ವಿಕೆಟ್ ಪಡೆದರು.
ಸೋಲುವ ಪಂದ್ಯವನ್ನು ಗೆಲ್ಲಿಸಿದ ರಿಂಕು
168 ರನ್ಗಳ ಗುರಿಯನ್ನು ಬೆನ್ನಟ್ಟಿದ ಮೀರತ್ ಮಾವೆರಿಕ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಅಕ್ಷಯ್ ದುಬೆ ಮತ್ತು ಸ್ವಸ್ತಿಕ್ ಚಿಕಾರ ಕ್ರಮವಾಗಿ 11 ಮತ್ತು 10 ರನ್ ಗಳಿಸಿದರು. ರಿತುರಾಜ್ ಶರ್ಮಾ (5) ಮತ್ತು ಮಾಧವ್ ಕೌಶಿಕ್ (7) ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ ಮತ್ತು ಬೇಗನೆ ಔಟಾದರು. ಮೀರತ್ ತಂಡ ಸಂಕಷ್ಟದಲ್ಲಿದ್ದಾಗ, ರಿಂಕು ಸಿಂಗ್ ಬ್ಯಾಟಿಂಗ್ಗೆ ಬಂದರು. ಅವರು 48 ಎಸೆತಗಳಲ್ಲಿ 108 ರನ್ ಗಳಿಸಿದರು. ಈ ಇನ್ನಿಂಗ್ಸ್ನಲ್ಲಿ ಅವರ ಸ್ಟ್ರೈಕ್ ರೇಟ್ 225 ಆಗಿತ್ತು.
