ಭಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ನಿರ್ಮಾಣವಾದ 15 ಅಡಿ ಎತ್ತರದ ರಥ.!

ಯಲ್ಲಾಪುರ: ಪಟ್ಟಣದ ಭಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ಹುಬ್ಬಳ್ಳಿಯ ಕೃಷ್ಣ ಮಠಕ್ಕಾಗಿ 15 ಅಡಿ ಎತ್ತರದ ರಥವನ್ನು ನಿರ್ಮಿಸಲಾಗಿದ್ದು, ಎಲ್ಲರ ಗಮನ ಸೆಳೆದಿದೆ. ಬುಧವಾರ ರಥವನ್ನು ಪೂಜಿಸಿ ಹುಬ್ಬಳ್ಳಿಯ ಕೃಷ್ಣ ಮಠಕ್ಕೆ ಕಳುಹಿಸಲಾಯಿತು.

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ದಕ್ಷಿಣ ಕನ್ನಡ ದ್ರಾವಿಡ ಸಮಾಜದವರ ಕೃಷ್ಣ ಮಠಕ್ಕಾಗಿ ಈ ರಥವನ್ನು ನಿರ್ಮಿಸಲಾಗಿದೆ. ಕಲಾಕೇಂದ್ರದ ಮುಖ್ಯಸ್ಥರಾದ ಅರುಣ ಗುಡಿಗಾರ ಹಾಗೂ ಸಂತೋಷ ಗುಡಿಗಾರ ನೇತೃತ್ವದಲ್ಲಿ ಕಲಾವಿದರು ಸುಂದರ ಕಲಾಕೃತಿಗಳ ಕೆತ್ತನೆಯೊಂದಿಗೆ ರಥ ನಿರ್ಮಿಸಿದ್ದಾರೆ.