ದೇಶ ಪ್ರೇಮಕ್ಕೆ ಬಡತನವಿಲ್ಲ!

ಯಲ್ಲಾಪುರ: ಉಮ್ಮಚಗಿ ಪಂಚಾಯತ ಬಾಳೆಗದ್ದೆಯ ಬಡ ಅನಂತ ರಾಮಾ ಸಿದ್ದಿ ಕುಟುಂಬಕ್ಕೆ ಇದ್ದ ಮನೆಯೂ ಮಳೆಯಿಂದಾಗಿ ಇಲ್ಲವಾಗಿದೆ. ಪಾತ್ರೆ, ಉಡುಗೆ ತೊಡುಗೆಗಳೆಲ್ಲ ಹಾಳಾಗಿವೆ. ತಾಡ್ಪಲ್ ಹೊದೆಸಿದ ಗುಡಿಸಲಿನಲ್ಲಿ ವಾಸವಾಗಿದ್ದರೆ. ಕೂಲಿ ಮಾಡಿ ಬದುಕುವ ಇವರ ಬಡತನ ದೇಶ ಪ್ರೇಮದ ವಿಷಯದಲ್ಲಿ ಅಡ್ಡಿಯಾಗಲಿಲ್ಲ. ಎಲ್ಲರಂತೆಯೇ ತಾವೂ ಧ್ವಜವಂದನೆ ಸಲ್ಲಿಸಿ ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.