ಕ್ಯಾಬ್​ ಚಾಲಕ ಆತ್ಮಹತ್ಯೆ: ಮಗನ ಶವದ ಮುಂದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದ ತಾಯಿ

ಬೆಂಗಳೂರು, ಆಗಸ್ಟ್​ 25: ಕ್ಯಾಬ್​ ಚಾಲಕ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಶವದ ಮುಂದೆ ಕಣ್ಣೀರಿಡುತ್ತಾ ತಾಯಿ ಕೂಡ ಕೊನೆಯುಸಿರೆಳೆದಿರುವಂತಹ ದಾರುಣ ಘಟನೆ ನಗರದ ಕಾವೇರಿಪುರದಲ್ಲಿ ನಡೆದಿದೆ. ಅರುಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಕ್ಯಾಬ್ ಚಾಲಕ. ಸರಸ್ವತಿ (78) ಮೃತ ತಾಯಿ. ಅರುಣ್ ಕುಮಾರ್​ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.