ನಿಂಬೆಹಣ್ಣು ಇಟ್ಟು ಪೂಜೆ ಮಾಡಿ ಬಳಿಕ ಮನೆ ಬಾಗಿಲು ಮುರಿದು ಕಳ್ಳತನ

ಮೈಸೂರು, ಜುಲೈ,28: ಜಿಲ್ಲೆಯ ಜೆಪಿ ನಗರದ ಎರಡನೇ ಹಂತದಲ್ಲಿ ತಡರಾತ್ರಿ ಸಿನಿಮೀಯ ರೀತಿಯಲ್ಲಿ ಮನೆ ಬೀಗ ಮುರಿದು ಕಳ್ಳ ಕೈ ಚಳಕ ತೋರಿಸಿದ್ದಾನೆ. ಪೊಲೀಸರ ಮನೆಯಲ್ಲೇ ಕಳ್ಳ ಕಳ್ಳತನ ಮಾಡಿದ್ದಾನೆ. ಇನ್ನು ಕಳ್ಳ ಮನೆಯಲ್ಲಿರುವಾಗಲೇ ಮನೆಗೆ ಮನೆ ಮಾಲೀಕ ವಾಪಾಸಾಗಿದ್ದು ಮಾಲೀಕನನ್ನು ಕಂಡು ಗಾಬರಿಗೊಂಡ ಕಳ್ಳ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಚಾಕು ತೋರಿಸಿ ಎಸ್ಕೇಪ್ ಆಗಿದ್ದಾನೆ.

ಇನ್ನು ಎಸ್ಕೇಪ್ ಆಗುವ ಭರದಲ್ಲಿ ಕಳ್ಳತನಕ್ಕೆ ಬಳಸಿದ ಕಬ್ಬಿಣದ ರಾಡ್, ಸಲಾಕೆ, ಎಲೆಕ್ಟ್ರಿಕ್ ಸಾಮಾನು, ಎರಡು ಬ್ಯಾಗ್ ಸೇರಿದಂತೆ ತಮ್ಮ ಲಗೇಜ್​ಗಳನೆಲ್ಲಾ ಬಿಟ್ಟು ಪರಾರಿಯಾಗಿದ್ದಾನೆ. ಮನೆ ಮಾಲೀಕ ಮನೆಯೊಳಗೆ ಹೋಗಿ ನೋಡಿದಾಗ 135 ಗ್ರಾಂಗೂ ಅಧಿಕ ಚಿನ್ನಾಭರಣ ದೋಚಿರುವುದು ಖಚಿತವಾಗಿದೆ. ಘಟನೆ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

ಕಳ್ಳತನ ಮಾಡುವಾಗಲೂ ಭಕ್ತಿ ಮೆರೆದ ಚಾಲಾಕಿ ಕಳ್ಳ

ಇನ್ನು ಈ ಚಾಲಾಕಿ ಕಳ್ಳರು ಬಾಗಿಲು ಒಡೆಯೋ ಮುನ್ನ ನಿಂಬೆಹಣ್ಣ ಹಿಡಿದು ನಮಸ್ಕಾರ ಮಾಡಿ ಪೂಜೆ ಮಾಡಿದ ಬಳಿಕ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ.