ಮೊಹರಂ ಹಬ್ಬದಲ್ಲಿ ರಾಷ್ಟ್ರಪ್ರೇಮ.! ತ್ರಿವರ್ಣಗಳಿಂದ ತಾಬೂತ್ ಅಲಂಕಾರ.!

ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ ಮುಸ್ಲಿಂ ಸಮುದಾಯದವರು ಮೊಹರಂ ಹಬ್ಬವನ್ನು ಆಚರಿಸಿದರು.
ಕಿರವತ್ತಿಯ ಜಯಂತಿ ನಗರದಲ್ಲಿ ಮೊಹರಂ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜದ ಬಣ್ಣಗಳ ಹೂಗಳಿಂದ ತಾಬೂತ್ ಗೆ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ಕೇಸರಿ ಬಣ್ಣಕ್ಕೆ ಚೆಂಡು ಹೂ, ಬಿಳಿ ಬಣ್ಣಕ್ಕೆ ಮಲ್ಲಿಗೆ ಹೂ ಹಾಗೂ ಹಸಿರು ಬಣ್ಣಕ್ಕೆ ಎಲೆಗಳನ್ನು ಬಳಸಿ, ಮಧ್ಯೆ ಅಶೋಕ ಚಕ್ರವನ್ನೂ ರಚಿಸಿ ರಾಷ್ಟ್ರಪ್ರೇಮ ಮೆರೆದರು.

ಈ ವಿಶೇಷ ಅಲಂಕಾರವನ್ನು ಕಿರವತ್ತಿ ಸುತ್ತಮುತ್ತಲಿನ ನೂರಾರು ಜನರು ಬಂದು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಕಿರವತ್ತಿಯ ಗ್ರಾ.ಪಂ ಸದಸ್ಯ ರೆಹಮತ್ ಅಬ್ಬಿಗೇರಿ ಅವರ ನೇತೃತ್ವದಲ್ಲಿ ಈ ಅಲಂಕಾರ ಮಾಡಲಾಗಿತ್ತು.