ಜೋರು ಗಾಳಿ-ಮಳೆಗೆ ತುಂಡಾದ ಕರೆಂಟ್ ಲೈನ್.! ದುರಸ್ತಿಗೊಳಿಸಿದ ಹೆಸ್ಕಾಂ ಸಿಬ್ಬಂದಿ

ಯಲ್ಲಾಪುರ: ತಾಲೂಕಿನ ತಟಗಾರ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆ ಮರವೊಂದು ಬಿದ್ದು, ತಂತಿ ತುಂಡಾಗಿ ಹರಿದು ಬಿದ್ದಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿ, ತಟಗಾರ ಭಾಗಕ್ಕೆ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಂಬ ಹಾಗೂ ತಂತಿಯನ್ನ ಬದಲಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.