ಕ.ವಿ.ಪ್ರ.ನಿ.ನಿ.,ಲೆಕ್ಕಾಧಿಕಾರಿಗಳ ಸಂಘ,ಆನಂದ ರಾವ್‌ ವೃತ್ತ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ತಾಳಮದ್ದಳೆ- ಸನ್ಮಾನ

ಯಕ್ಷಗಾನ-ತಾಳಮದ್ದಲೆ ಕ್ಷೇತ್ರದಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಹೊಸ ತಲೆಮಾರನ್ನೇ ಸೃಷ್ಟಿಸುತ್ತಿರುವ ಕಲಾವಿದೆಯರಾದ ಡಾ.ವಿಜಯನಳಿನಿ ರಮೇಶ,  ನಿರ್ಮಲಾ ಹೆಗಡೆ ಗೋಳಿಕೊಪ್ಪ, ಸುಮಾ ಹೆಗಡೆ ಗಡಿಗೆಹೊಳೆ ಅವರಿಗೆ ಖ್ಯಾತ ವಿಮರ್ಶಕ, ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ-ರಜನಿ ನರಹಳ್ಳಿ ದಂಪತಿಗಳಿಂದ ಹಾಗೂ  ಏಕ ವ್ಯಕ್ತಿ ತಾಳಮದ್ದಳೆಯ ರೂವಾರಿ ದಿವಾಕರ ಹೆಗಡೆ ಕೆರೆಹೊ0ಡ ಇವರ ಸಮ್ಮುಖದಲ್ಲಿ ಸನ್ಮಾನ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ಹಾಗೂ ಕಲಾವಿದೆಯರಿ0ದ ಸೀತಾಪರಿತ್ಯಾಗ ತಾಳಮದ್ದಳೆ, ಕೂಡ  ದಿನಾಂಕ 4-2-2024 ರವಿವಾರ ಬೆಳಿಗ್ಗೆ 10 ಘಂಟೆಯಿ0ದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ ಕ.ವಿ.ಪ್ರ.ನಿ.ನಿ,ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ನಡೆಸಲಾಗುತ್ತಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.