ದಾಂಡೇಲಿಯ ಶ್ರೀ.ವಿದ್ಯಾಧಿರಾಜ ಸಭಾಭವನದಲ್ಲಿ ಒಂದೇ ಪಂಕ್ತಿಯಲ್ಲಿ ಊಟ ಸವಿದ ದೇಶಪಾಂಡೆ ಹಾಗೂ ಸುನೀಲ್ ಹೆಗಡೆ

ದಾಂಡೇಲಿ : ಅವರು ರಾಜಕೀಯವಾಗಿ ಬದ್ದ ವೈರಿಗಳು. ಆದರೆ ಒಂದೇ ಸಮಾಜದ ಬಾಂಧವರು. ಅಂದ ಹಾಗೆ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ.ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಶನಿವಾರ ಆಗಮಿಸಿದ್ದರು. ಅದೇ ರೀತಿಯಾಗಿ‌ ಮಾಜಿ ಶಾಸಕರು ಹಾಗೂ ಬಿಜೆಪಿ‌ ನಾಯಕರಾದ ಸುನೀಲ್ ಹೆಗಡೆಯವರು ಸಹ ಕುಟುಂಬ ಸಮೇತರಾಗಿ ಆಗಮಿಸಿದ್ದರು.

ಪೂಜೆ ಹಾಗೂ ಸ್ವಾಮೀಜಿಯವರನ್ನು ಭೇಟಿಯಾಗಿ ದರ್ಶನ‌ ಪಡೆದ ಬಳಿಕ ಶ್ರೀ.ವಿದ್ಯಾಧಿರಾಜ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಾಪ್ರಸಾದ ಸ್ವೀಕರಣೆಗೆ ಪ್ರತ್ಯೇಕ ಪ್ರತ್ಯೇಕವಾಗಿ ಆಗಮಿಸಿದರು.

ಆರ್.ವಿ.ದೇಶಪಾಂಡೆಯವರು ಬಲ ಸಾಲಿನಲ್ಲಿ ಕೂತು ಊಟ‌ ಮಾಡಿದರೇ, ಇತ್ತ ಸುನೀಲ್ ಹೆಗಡೆಯವರು‌ ಮತ್ತು ಅವರ ಕುಟುಂಬಸ್ಥರು ಮುಂಭಾಗದ ಸಾಲಿನಲ್ಲಿ ಕೂತು ಶ್ರೀ.ಸ್ವಾಮಿಯ ಪ್ರಸಾದವನ್ನು ಸ್ವೀಕರಿಸಿದರು. ಒಬ್ಬರ ಮುಖ ಒಬ್ಬರು ನೋಡದಿದ್ದರೂ, ಭಕ್ತಿಯಿಂದ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು.